ಬೀಡಿ ಕಾರ್ಮಿಕರ ಹೋರಾಟ ತೀವ್ರಗೊಳಿಸುವುದು ಅಗತ್ಯ: ಕವಿರಾಜ್

Update: 2024-10-15 13:59 GMT

ಉಡುಪಿ, ಅ.15: ಬೀಡಿ ಕಾರ್ಮಿಕರ ಕನಿಷ್ಟ ಕೂಲಿ, ಬಾಕಿ ಇರುವ ತುಟ್ಟಿಭತ್ಯೆ, ಇಎಸ್‌ಐ ಆಸ್ಪತ್ರೆ, ಪಿಂಚಣಿ, ಪಿ.ಎಫ್ ಸಮಸ್ಯೆಗಳ ಬಗ್ಗೆ ಹೋರಾಟ ನಡೆದಿದ್ದು ಮುಂದೆ ಮತ್ತಷ್ಟು ತೀವ್ರಗೋಳಿಸಬೇಕಾಗಿದೆ ಎಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಸದಸ್ಯ ಕವಿರಾಜ್ ಎಸ್.ಕಾಂಚನ್ ಹೇಳಿದ್ದಾರೆ.

ಸಿ.ಪಿ.ಐ.ಎಂ. ಪಕ್ಷದ ಕೇಳಾರ್ಕಳಬೆಟ್ಟು ಶಾಖಾ ಸಮ್ಮೇಳನದಲ್ಲಿ ಸಮ್ಮೇಳನ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅವಿಭಜಿತ ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ ಲಕ್ಷಾಂತರ ಬೀಡಿ ಕಾರ್ಮಿಕರು ಕೆಲಸ ಮಾಡಿ ತಮ್ಮ ಜೀವನ ಹಾಗೂ ಕುಟುಂಬ ನಿರ್ವಹಣೆ ಯನ್ನು ನಡೆಸುತ್ತಿದ್ದಾರೆ. ಬೀಡಿ ಕಂಪನಿಗಳಲ್ಲಿ ಬೇರೆ ಬೇರೆ ವಿಭಾಗದಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅದರೆ ಸರಕಾರ ಇವತ್ತು ಬೀಡಿ ಕಾರ್ಮಿಕರ ಬಗ್ಗೆ ಚಕಾರವೆತ್ತುತ್ತಿಲ್ಲ. ಸರಕಾರ ನಿಗದಿ ಮಾಡಿದ ತುಟ್ಟಿಭತ್ಯೆಯನ್ನು ಮಾಲಕರು ನಿಡುತ್ತಿಲ್ಲ. ಅದ್ದರಿಂದ ಎರಡು ಜಿಲ್ಲೆಯ ಬೀಡಿ ಕಾರ್ಮಿಕರು ಒಗ್ಗೂಡಿ ಎಲ್ಲಾ ಶಾಸಕರ ಮತ್ತು ಸಂಸದರ ಕಛೇರಿ ಮನೆ ಮುಂದೆ ಅನಿರ್ದಿಷ್ಟ ಹೋರಾಟ ಕೈಗೊಳ್ಳಬೇಕೆಂದು ಅವರು ಕರೆ ನೀಡಿದರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಉಮೇಶ್ ಕುಂದರ್, ಉಡುಪಿ ವಲಯ ಸಮಿತಿ ಸದಸ್ಯ ನಳಿನಿ ಎಸ್. ಹಾಗೂ ಶಾಖಾ ಸದಸ್ಯರು ಉಪಸ್ಥಿತರಿದ್ದರು. ಶಾಖಾ ಕಾರ್ಯದರ್ಶಿ ವರದಿ ನೀಡಿ ಅದರ ಮೇಲೆ ಚರ್ಚೆ ನಡೆಸಲಾಯಿತು. ಧ್ವಜಾರೋಹಣವನ್ನು ಹಿರಿಯ ಪಕ್ಷದ ಸದಸ್ಯೆ ರಾಧ ನೇರವೆರಿಸಿದರು. ಕೇಳಾರ್ಕಳಬೆಟ್ಟು ಶಾಖೆಯ ನೂತನ ಕಾರ್ಯದರ್ಶಿಯಾಗಿ ಕಮಲ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News