ಪ್ರತ್ಯೇಕ ಪ್ರಕರಣ: ವಾಹನ ಚಾಲಕ, ಗಾರೆ ಕೆಲಸಗಾರ ಕುಸಿದು ಬಿದ್ದು ಮೃತ್ಯು

ಅಮಾಸೆಬೈಲು, ಮಾ.18: ಕುಡಿಯುವ ನೀರು ಕಾಮಗಾರಿ ಯೋಜನೆಯ ವಾಹನದ ಚಾಲಕರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಹೊಸಂಗಡಿ ಗ್ರಾಮದ ಕೋಟೆಕೆರೆ ಎಂಬಲ್ಲಿ ಮಾ.17ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಗದಗ ಮೂಲದ ಸಿದ್ದಪ್ಪನೀಲಪ್ಪ ಬಾಲೆ ಹೊಸೂರು(29) ಎಂದು ಗುರುತಿಸಲಾಗಿದೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಹಠಾತ್ತನೆ ಕುಸಿದು ಬಿದ್ದು ತೀವ್ರವಾಗಿ ಅಸ್ವಸ್ಥರಾಗಿದ್ದ ಇವರು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಇವರು ಹೃದಯಾಘಾತ ಅಥವಾ ಯಾವುದೋ ಕಾಯಿಲೆಯಿಂದ ಸಹಜವಾಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಸಿದು ಬಿದ್ದು ಗಾರೆ ಕೆಲಸಗಾರ ಮೃತ್ಯು
ಗಂಗೊಳ್ಳಿ 8: ತ್ರಾಸಿ ಗ್ರಾಮದ ರಾಮಂದಿರದ ಬಳಿ ಗಾರೆ ಕೆಲಸ ಮಾಡುತ್ತಿದ್ದ ಕಂದಾವರ ಗ್ರಾಮದ ಚಂದ್ರಶೇಖರ(61) ಎಂಬವರು ಮಾ.17ರಂದು ಮಧ್ಯಾಹ್ನ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.