ಸಂತೆಕಟ್ಟೆ: ಅಂಡರ್‌ ಪಾಸ್ ಕಾಮಗಾರಿ ಸ್ಥಳದಲ್ಲಿ ಉರುಳಿ ಬಿದ್ದ ಟ್ಯಾಂಕರ್; ಚಾಲಕನಿಗೆ ಗಾಯ

Update: 2024-06-08 06:16 GMT

ಉಡುಪಿ, ಜೂ.8: ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರ ಅಂಡರ್‌ ಪಾಸ್‌ ನ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಟ್ಯಾಕರೊಂದು ಉರುಳಿ ಬಿದ್ದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಉಡುಪಿ ಕಡೆಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಟ್ಯಾಂಕರ್, ನೇರ ವಾಗಿ ಅಂಡರ್‌ಪಾಸ್‌ನಲ್ಲಿ ಹೋಗುವ ಬದಲು, ಸಂತೆಕಟ್ಟೆ ಜಂಕ್ಷನ್‌ಗೆ ಹೋಗಿತ್ತು. ಬಳಿಕ ಚಾಲಕ ಉಪ್ಪೂರು ಕಡೆ ಹೋಗಲು ಸಂತೆಕಟ್ಟೆಯ ಮಾರುಕಟ್ಟೆ ಸಮೀಪದ ರಸ್ತೆಯಲ್ಲಿ ಟ್ಯಾಂಕರನ್ನು ಚಲಾಯಿಸಿಕೊಂಡು ಹೋದ ಎನ್ನಲಾಗಿದೆ.

ಅಲ್ಲಿ ಟ್ಯಾಂಕರ್ ಮಣ್ಣು ಕುಸಿದು ಅಂಡರ್‌ ಪಾಸ್ ಕಾಮಗಾರಿಯ ಹೊಂಡಕ್ಕೆ ಮಗುಚಿ ಬಿತ್ತು.  ಇದರಿಂದ ಚಾಲಕನಿಗೆ ಸಣ್ಣಪುಟ್ಟ ಗಾಯ ಗಳಾಗಿರುವ ಬಗ್ಗೆ ತಿಳಿದುಬಂದಿದೆ. ಸ್ಥ

ಳಕ್ಕೆ ಉಡುಪಿ ನಗರ ಸಂಚಾರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News