ಉಡುಪಿ ಹತ್ಯಾಕಾಂಡ; ಸಂತ್ರಸ್ತರ ಮನೆಗೆ ನಾಸಿರ್ ಲಕ್ಕಿಸ್ಟಾರ್, ಮಮ್ತಾಝ್ ಅಲಿ ನೇತೃತ್ವದ ನಿಯೋಗ ಭೇಟಿ

Update: 2023-11-19 12:51 GMT

ಉಡುಪಿ: ಜಿಲ್ಲೆಯ ನೇಜಾರ್ ನಲ್ಲಿ ಒಂದೇ ಕುಟುಂಬದ ತಾಯಿ ಹಾಗೂ ಮೂವರು ಮಕ್ಕಳ ಕೊಲೆಯಾದ ಮನೆಗೆ ದ.ಕ. ಜಿಲ್ಲಾ ವಖ್ಫ್ ಮಂಡಳಿ ಅಧ್ಯಕ್ಷರಾದ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ. ಜಿಲ್ಲಾಧ್ಯಕ್ಷರಾದ ಬಿ.ಎಂ. ಮಮ್ತಾಝ್ ಅಲಿ ನೇತೃತ್ವದ ನಿಯೋಗ ಭೇಟಿ ನೀಡಿ ಸಂತ್ರಸ್ತ ಕುಟುಂಬಿಕರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭ ಯುನೈಟೆಡ್ ಅರಬ್ ಎಮಿರೇಟ್ಸ್ (ಯು.ಎ.ಇ) ಟ್ರೇಡ್ ಕಮಿಷನರ್ ಹಾರಿಸ್ ಮುಕ್ಕ, ಆಸಿಫ್ ಹೋಮ್ ಪ್ಲಸ್, ಕಾಂಗ್ರೆಸ್ ಮುಖಂಡರಾದ ಎಂ.ಎ. ಗಫೂರ್, ಮೃತ ಹಸೀನಾರ ಪತಿ ನೂರ್ ಮುಹಮ್ಮದ್, ಅವರ ಪುತ್ರ ಅಸಾದ್, ಮೃತ ಹಸೀನಾರ ಸಹೋದರ ಅಶ್ರಫ್ ಮುಂತಾದವರು ಉಪಸ್ಥಿತರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News