ಮಲಪನಗುಡಿಯಲ್ಲಿ 'ಶಾಸಕರ ಜನ ಸಂಪರ್ಕ ಸಭೆ'

Update: 2024-07-16 10:26 GMT

ಹೊಸಪೇಟೆ, ಜು.16: ವಿಜಯನಗರ ಮಲಪನಗುಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಕಡ್ಡಿರಾಂಪುರ ತಾಂಡ, ಗಾಳಮ್ಮನಗುಡಿ, ಹೊಸ ಮಲಪನಗುಡಿ ಮತ್ತು ಹಳೆ ಮಲಪನಗುಡಿ ಗ್ರಾಮಗಳಿಗೆ ಭೇಟಿ ನೀಡಿ 'ಶಾಸಕರ ಜನ ಸಂಪರ್ಕ ಸಭೆ' ನಡೆಸಿದರು.

ಸದರಿ ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಆವಶ್ಯಕತೆ ಇರುವ ಕಡೆ ಸಿಸಿ ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭ ಮಲಪನಗುಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಿಕಾ, ಉಪಾಧ್ಯಕ್ಷ ದೊರೆರಾಜ್, ಎಲ್ಲಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ಎಲ್ಲಾ ಊರಿನ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

 

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News