ಅ.18: ಯುನಿವೆಫ್‌ನಿಂದ ಬೆಂಗ್ರೆ ಕಸ್ಬಾದಲ್ಲಿ ಪ್ರವಾದಿ ಅಭಿಯಾನ

Update: 2024-10-17 15:47 GMT

ಮಂಗಳೂರು: ಯುನಿವೆಫ್ ಕರ್ನಾಟಕವು ಸೆ.20ರಿಂದ ಡಿಸೆಂಬರ್ 20ರವರೆಗೆ ಮಾನವ ಸ್ವಾತಂತ್ರ್ಯ, ಕಲ್ಯಾಣ ಮತ್ತು ಪ್ರವಾದಿ ಮುಹಮ್ಮದ್ (ಸ) ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ ಅರಿಯಿರಿ ಮನುಕುಲದ ಪ್ರವಾದಿಯನ್ನು ಅಭಿಯಾನದ ಅಂಗವಾಗಿ ಬೆಂಗ್ರೆ ಕಸ್ಬಾದ ಅನಸ್ ಬಿನ್ ಮಾಲಿಕ್ ಮಸೀದಿ ಬಳಿ ಅ.18ರಂದು ರಾತ್ರಿ 8ಕ್ಕೆ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ನಮ್ಮ ಬದುಕು ಮತ್ತು ಪ್ರವಾದಿ ಮುಹಮ್ಮದ್ (ಸ) ರ ಜೀವನ ಎಂಬ ವಿಷಯದಲ್ಲಿ ಮುಖ್ಯ ಭಾಷಣ ಮಾಡಲಿರುವರು. ಮುಸ್ಲಿಮ್ ಜಸ್ಟಿಸ್ ಫೋರಮ್ ಇದರ ಉಪಾಧ್ಯಕ್ಷ ಇದ್ದಿನ್‌ ಕುಂಞಿ ಅತಿಥಿಯಾಗಿ ಭಾಗವಹಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News