ಅ.20 : ಸಿಪಿಎಂ ಮಂಗಳೂರು ನಗರ ಉತ್ತರ ವಲಯ ಸಮ್ಮೇಳನ

Update: 2024-10-17 11:57 GMT

ಮಂಗಳೂರು, ಅ.17:ಸಿಪಿಎಂ ಮಂಗಳೂರು ನಗರ ಉತ್ತರ ವಲಯ ಸಮ್ಮೇಳನವು ಅ.20ರಂದು ಯೆಯ್ಯಾಡಿಯಲ್ಲಿರುವ ಸಣ್ಣ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ನಡೆಯಲಿದೆ.

ಸಿಪಿಎಂ ಪಕ್ಷದ 24 ನೇ ಅಖಿಲ ಭಾರತ ಮಹಾ ಅಧಿವೇಶನ 2025ರ ಎಪ್ರಿಲ್‌ನಲ್ಲಿ ಮಧುರೈನಲ್ಲಿ ನಡೆಯಲಿದೆ. ಅದರ ಪೂರ್ವ ಭಾವಿಯಾಗಿ ಎಲ್ಲಾ ಹಂತಗಳ ಸಮ್ಮೇಳನಗಳು ದೇಶಾದ್ಯಂತ ಆರಂಭಗೊಂಡಿವೆ. ದ.ಕ. ಜಿಲ್ಲೆಯಲ್ಲಿಯೂ ಸಮ್ಮೇಳನದ ಪ್ರಕ್ರಿಯೆಗಳು ಆರಂಭಗೊಂಡಿದೆ. ಅಂದು ಬೆಳಗ್ಗೆ 9:30ಕ್ಕೆ ಧ್ವಜಾರೋಹಣದೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಸಿಪಿಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಕಾರ್ಯ ದರ್ಶಿ ಮಂಡಳಿ ಸದಸ್ಯರಾದ ಡಾ.ಕೃಷ್ಣಪ್ಪ ಕೊಂಚಾಡಿ, ವಸಂತ ಆಚಾರಿ ಮಾರ್ಗದರ್ಶಕರಾಗಿರುತ್ತಾರೆ. ಆ ನಂತರ ಸಮ್ಮೇಳನದ ಪ್ರತಿನಿಧಿ ಕಲಾಪಗಳು ನಡೆಯಲಿವೆ ಎಂದು ಸಿಪಿಎಂ ಮಂಗಳೂರು ನಗರ ಉತ್ತರ ವಲಯ ಸಮಿತಿ ಕಾರ್ಯದರ್ಶಿ ಪ್ರಮೀಳಾ ಕೆ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News