ಬೆಳ್ತಂಗಡಿ ತಾಲೂಕು ಖಾಝಿ ಸ್ವೀಕಾರ ಸಮಾರಂಭ; ಕೂರತ್ ತಂಙಳ್ ಅನುಸ್ಮರಣೆ

Update: 2024-08-18 16:39 GMT

ಬೆಳ್ತಂಗಡಿ: ಸುನ್ನೀ ಸಂಯುಕ್ತ ಜಮಾಅತ್ ವತಿಯಿಂದ ಬೆಳ್ತಂಗಡಿ ತಾಲೂಕಿನ 77 ಮೊಹಲ್ಲಾದ ಖಾಝಿ ಸ್ವೀಕಾರ ಸಮಾರಂಭ ಆ.17ರಂದು ಗುರುವಾಯನಕೆರೆ ಎಫ್ ಎಂ ಗಾರ್ಡನ್ ನಲ್ಲಿ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಇಸ್ಮಾಯಿಲ್ ಹಾದಿ ತಂಙಳ್ ಮದನಿ ಅಧ್ಯಕ್ಷತೆಯಲ್ಲಿ ಜರಗಿತು.

ಖಾಝಿಯಾಗಿ ಅಧಿಕಾರ ಸ್ವೀಕರಿಸಿದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಅಬೂಬಕ್ಕರ್ ಮುಸ್ಲಿಯಾರ್ ಮಾತನಾಡಿ ಧರ್ಮ ಸಂಬಂಧವಾದ ಆರಾಧನೆ, ನಿಖಾಹ್, ವ್ಯಾಪಾರಕ್ಕೆ ಸಂಬಂಧಿಸಿದಂತೆ ಇಸ್ಲಾಮಿನ ಕರ್ಮ ಶಾಸ್ತ್ರಗಳಿಗೆ ನ್ಯಾಯ ದೊರಕಿಸಿಕೊಡಲು ನನಗೆ ಅಧಿಕಾರ ನೀಡಿದ್ದೀರಿ ಇನ್ನು ಮುಂದಕ್ಕೆ ನನ್ನ ಮಾತನ್ನು ಪಾಲಿಸುವುದು ನಿಮಗೆ ಕಡ್ಡಾಯವಾಗಿದೆ ಎಂದರು.

ಸಯ್ಯದ್ ಫಝಲ್ ಜಮಾಲುಲೈಲಿ ತಂಙಳ್ ವಾದಿ ಇರ್ಫಾನ್ ಅವರು ಇತ್ತೀಚೆಗೆ ನಿಧನರಾದ ಸೆಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರ ಅನುಸ್ಮರಣಾ ದುಆ ನೆರವೇರಿಸಿದರು.

ಸಮಿತಿಯ ಕಾರ್ಯಾಧ್ಯಕ್ಷರಾದ ಅಶ್ರಫ್ ಸಖಾಫಿ ಮೂಡಡ್ಕ ಅನುಸ್ಮರಣಾ ಭಾಷಣ ಮಾಡಿದರು. ಸುನ್ನೀ ಜಂಯೀಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಉದ್ಘಾಟಿಸಿದರು.

ಸಮಿತಿಯ ಕೋಶಾಧಿಕಾರಿ ಸೈಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನ್ನೀ ಜಂಯೀಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಹುಸೈನ್ ಸಅದಿ ಕೆಸಿ ರೋಡ್ ಸಂದೇಶ ಭಾಷಣ ಮಾಡಿದರು. ರಾಜ್ಯ ವಕ್ಫ್ ಮಂಡಳಿ ಸದಸ್ಯ ಎಂಕೆಎಂ ಶಾಫಿ ಸಅದಿ ಮಾತನಾಡಿ, ಅಂತಾರಾಷ್ಟ್ರೀಯ ಸುನ್ನೀ ಮುಸಲ್ಮಾನರು ಅಂಗೀಕರಿಸುವ ಏಕೈಕ ಉಲಮಾ ನಾಯಕರೆಂದರೆ ಅದು ಸುಲ್ತಾನುಲ್ ಉಲಮಾ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಮಾತ್ರ ಎಂದರು.

ವೇದಿಕೆಯಲ್ಲಿ ಸೈಯದ್ ಉಮ್ಮರ್ ಅಸ್ಸಖಾಫ್ ತಂಙಳ್ ಪರಪ್ಪು, ಸಯ್ಯದ್ ಸಾಬಿತ್ ತಂಙಳ್ ಪಾಟ್ರಕೋಡಿ, ಸಯ್ಯದ್ ಝೈನುಲ್ ಆಬಿದೀನ್ ಜಮಾಲುಲೈಲಿ ತಂಙಳ್ ಕಾಜೂರು, ಕಾವಲ್ಕಟ್ಟೆ ಹಝ್ರತ್, ಬಾದುಶಾ ಸಖಾಫಿ ಕೇರಳ, ಅಶ್ರಫ್ ‌ಸಅದಿ ಮಲ್ಲೂರು, ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಅಬೂಬಕ್ಕರ್ ಸಿದ್ದೀಕ್ ಮುಂಟುಗೋಳಿ, ಅಬ್ದುಲ್ ಹಕೀಂ ಅಝ್ಹರಿ, ಅಬೂಸ್ವಾಲಿಹ್ ಸಖಾಫಿ ಪೂನೂರು, ಕೂರತ್ ತಂಙಳ್ ಪುತ್ರ ಸೈಯ್ಯದ್ ಅಬ್ದುರ್ರಹ್ಮಾನ್ ಮಸ್‌ಊದು, ಮಲ್ಜ ತಂಙಳ್, ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಮೊಗರ್ಪಣೆ, ಸದಸ್ಯರಾದ ಅಬೂಬಕ್ಕರ್ ಸಿದ್ದಿಖ್ ಕಾಜೂರು, ಜಂಯೀಯತುಲ್ ಉಲಮಾ ನಾಯಕರಾದ ಕಾಸಿಂ ಮುಸ್ಲಿಯಾರ್ ಕರಾಯ, ಹೈದರ್ ಮುಸ್ಲಿಯಾರ್ ಕರಾಯ, ಪಿಕೆ ಮುಹಮ್ಮದ್ ಮದನಿ ಕರಾಯ, ಆದಂ ಅಹ್ಸನಿ ತುರ್ಕಲಿಕೆ, ಕುಂಙಬ್ದುಲ್ಲ ದಾರಿಮಿ ಪರಪ್ಪು, ಯಾಕೂಬ್ ಮುಸ್ಲಿಯಾರ್ ಮದ್ದಡ್ಕ, ಉಮ್ಮರ್ ಸಖಾಫಿ ಕಾಜೂರು, ಮುಫತ್ತಿಶ್ ಹಾಫಿಳ್ ಮುಹಮ್ಮದ್ ಹನೀಫ್ ಮಿಸ್ಬಾಹೀ ಗೇರುಕಟ್ಟೆ, ಮುಸ್ತಫಾ ನಯೀಮಿ ಹಾವೇರಿ, ಹನೀಫ್ ಸಖಾಫಿ ಬಂಗೇರ ಕಟ್ಟೆ, ಸಮಿತಿ ಉಪಾಧ್ಯಕ್ಷ ಅಬ್ದುಖಾದರ್ ಹಾಜಿ ಉಜ್ರಿಬೆಟ್ಟು, ಬದ್ರುದ್ದೀನ್ ಪರಪ್ಪು, ಕಾಸಿಂ ಪದ್ಮುಂಜ, ಅಬ್ಬಾಸ್ ಬಟ್ಲಡ್ಕ, ಸಹ ಕಾರ್ಯದರ್ಶಿಗಳಾದ ಶರೀಫ್ ಸಖಾಫಿ ನೆಕ್ಕಿಲು, ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು, ವಝೀರ್ ಪಿಚ್ಚಲ್ಲಾರ್, ಎಕೆ ಅಹ್ಮದ್ ಎರುಕಡಪ್ಪು, ಶರೀಫ್ ಸಖಾಫಿ ಉಜಿರ್ಬೊಟ್ಟು, ತ್ವಾಹಿರ್ ಹಿಮಮಿ ಮಡಂತ್ಯಾರ್‌, ಇಖ್ಬಾಲ್ ಮಾಚಾರು, ಮುಹಮ್ಮದ್ ರಫೀ ಬೆಳ್ತಂಗಡಿ, ಸೆಲೀಂ ಕನ್ಯಾಡಿ ಸೇರಿದಂತೆ ಉಲಮಾ ಉಮರಾ ನೇತಾರರು ಉಪಸ್ಥಿತರಿದ್ದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಅಲ್ ಹಾಜಿ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರ್‌ ಸ್ವಾಗತಿಸಿ, ಬೆಳ್ತಂಗಡಿ ತಾಲೂಕಿನಲ್ಲಿ ಸುನ್ನೀ ಸಂಯುಕ್ತ ಜಮಾಅತ್ ನಡೆದುಕೊಂಡು ಬಂದ ದಾರಿ ನೆನಪಿಸಿಕೊಂಡರು. ಅಬ್ಬಾಸ್ ಬಟ್ಲಡ್ಕ ಧನ್ಯವಾದ ಸಲ್ಲಿಸಿದರು. ಅಶ್ರಫ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News