ಕಾರ್ಕಳ| ಏಕ ಬಳಕೆ ಪ್ಲಾಸ್ಟಿಕ್ ಮಾರಾಟಕ್ಕೆ ದಾಳಿ: ದಂಡ ವಸೂಲಿ

Update: 2024-09-04 11:36 GMT

ಕಾರ್ಕಳ : ಪುರಸಭೆಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ ಸಂಗ್ರಹಣೆ , ಮಾರಾಟ ಬಳಕೆ ನಿಷೇಧ ಕಾಯ್ದೆ ಅನ್ವಯ ಕಾರ್ಕಳ ಪುರಸಭಾ ಅಧಿಕಾರಿಗಳು ಅಂಗಡಿ ಮುಗ್ಗಟ್ಟು, ಹೋಟೆಲ್ ,ಮಾರ್ಕೆಟ್ ಗಳಿಗೆ ಪುರಸಭಾ ಮುಖ್ಯಾಧಿಕಾರಿ ರೂಪಾ ಟಿ ಶೆಟ್ಟಿ ಯವರ ನೇತೃತ್ವದಲ್ಲಿ ದಾಳಿ ನಡೆಸಿ ಸುಮಾರು 2 ಕೆಜಿಗಳಷ್ಟು ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡು ಸುಮಾರು 8,800 ರೂ. ದಂಡ ವಸೂಲಿ ಮಾಡಲಾಯಿತು

ಈ ಸಂದರ್ಭದಲ್ಲಿ ಪುರಸಭಾ ಕಂದಾಯ ಅಧಿಕಾರಿ ಅಶೋಕ್, ಕಚೇರಿ ವ್ಯವಸ್ಥಾಪಕ ಉದಯ ಕುಮಾರ್ ಜಿ, ಪರಿಸರ ಅಭಿಯಂತರ ಜ್ಯೋತಿಶ್ವರಿ, ಹಿರಿಯ ಆರೋಗ್ಯ ಅಧಿಕಾರಿ ಲೈಲಾ ಥಾಮಸ್, ಸಮುದಾಯ ಸಂಘಟಕ ಮಲ್ಲಿಕಾ ಪುರಸಭಾ ಸಿಬ್ಬಂದಿಗಳಾದ ಅಮೃತ ,ಲೋಲಾಕ್ಷಿ, ಜಗನ್ನಾಥ್ ಶೆಟ್ಟಿ, ಕೀರ್ತಿ, ಪ್ರಥ್ವಿ , ಪೌರಕಾರ್ಮಿಕರು ಉಪಸ್ಥಿತರಿದ್ದರು

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News