ಮಂಗಳೂರು | ಕರ್ನಾಟಕ ಸಲಫಿ ಅಸೋಸಿಯೇಶನ್ ಸದಸ್ಯರ ಸಮ್ಮಿಲನ
Update: 2024-09-30 10:48 GMT
ಮಂಗಳೂರು: ಕರ್ನಾಟಕ ಸಲಫಿ ಅಸೋಸಿಯೇಶನ್(ಕೆಎಸ್ಎ), ಮಂಗಳೂರು ಇದರ ಸದಸ್ಯರ ಸಮ್ಮಿಲನ ಸಭೆ ಸೆ.29ರಂದು ಮನ್ಹಜುಲ್ ಅಂಬಿಯಾ ಸಭಾಂಗಣದಲ್ಲಿ ಜರುಗಿತು.
ಕೆಎಸ್ಎ ಮಂಗಳೂರು ಇದರ ಅಧ್ಯಕ್ಷ ಡಾ.ಮುಹಮ್ಮದ್ ಹಫೀಝ್ ಸ್ವಲಾಹಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವಿಸ್ಲಂ ಇಸ್ಲಾಮಿಕ್ ಆರ್ಗನೈಸೇಶನ್ ನ ವಿದ್ವಾಂಸ ಅಬ್ದುಲ್ ಮಲಿಕ್, ನಾಯಕ ಸಿ.ಪಿ.ಸಲೀಂ ಮುಖ್ಯ ಭಾಷಣ ಮಾಡಿದರು.
ವಿಸ್ಡಂ ಯೂತ್' ಪ್ರತಿನಿಧಿಗಳಾದ ಅನ್ಫಸ್ ಮುಕರ್ರಂ ಮತ್ತು ಡಾ.ಶುನೂನ್ ದಅವಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಕೆಎಸ್ಎ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಯಾಸರ್ ಅಲ್ ಹಿಕಮಿ ಸ್ವಾಗತಿಸಿದರು. ಖಲೀಲ್ ತಲಪಾಡಿ ವಂದಿಸಿದರು.