ಬಜ್ಪೆಯಲ್ಲಿ ಇಂದು ಸೀರತ್ ಸಮಾವೇಶ

Update: 2023-10-19 10:08 GMT

ಬಜ್ಪೆ: ಯುನಿವೆಫ್ ಕರ್ನಾಟಕ 2023 ರ ಅಕ್ಟೋಬರ್ 6 ರಿಂದ ಡಿಸೆಂಬರ್ 22 ವರೆಗೆ "ಮಾನವ ಧರ್ಮ, ದೈವಿಕ ಕಾನೂನು ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಪ್ರಯುಕ್ತ ಅಕ್ಟೋಬರ್ 20 ರ ಶುಕ್ರವಾರ ಸಂಜೆ 6.45ಕ್ಕೆ ಬಜ್ಪೆ ಹಳೆ ಪೆಟ್ರೋಲ್ ಪಂಪ್ ಬಳಿ ಇರುವ ಲೈಕೋರಿಸ್ ಫ್ಲಾಟ್ ಆವರಣದಲ್ಲಿ ಸೀರತ್ ಸಮಾವೇಶ ಜರಗಲಿರುವುದು.

ಈ ಕಾರ್ಯಕ್ರಮದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು "ಪ್ರವಾದಿ ಹಃ ಮುಹಮ್ಮದ್ (ಸ) ರ ಮಾದರಿ ಜೀವನ" ಎಂಬ ವಿಷಯದಲ್ಲಿ ಪ್ರಮುಖ ಭಾಷಣ ಮಾಡಲಿದ್ದಾರೆ. ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಬಜ್ಪೆ ಶಾಖಾಧ್ಯಕ್ಷ ಅಬ್ದುರ್‍ರಹ್ಮಾನ್ ವಿನಂತಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News