ಸುರಿಬೈಲು: ನ.1ರಿಂದ 3ರ ತನಕ ದಾರುಲ್ ಅಶ್ ಅರಿಯ್ಯ ಸಿಲ್ವರ್ ಜ್ಯುಬಿಲಿ

Update: 2023-11-01 05:55 GMT

ಬಂಟ್ವಾಳ : ಸುರಿಬೈಲು ದಾರುಲ್ ಅಶ್ ಅರಿಯ್ಯ ಎಜ್ಯುಕೇಶನಲ್ ಟ್ರಸ್ಟ್ ಇದರ ಸಿಲ್ವರ್ ಜ್ಯುಬಿಲಿ, ಮರ್ಹೂಂ ಶೈಖುನಾ ಸುರಿಬೈಲು ಉಸ್ತಾದ್ ರವರ ಆಂಡ್ ನೇರ್ಚೆ ಹಾಗೂ ಅಶ್ ಅರಿಯ್ಯ ಸನದುದಾನ ಮಹಾ ಸಮ್ಮೇಳನವು ನವೆಂಬರ್ 1, 2 ಮತ್ತು 3 ರಂದು ಸುರಿಬೈಲ್ ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಮೆನೇಜರ್ ಸಿ.ಎಚ್. ಮುಹಮ್ಮದಾಲಿ ಸಖಾಫಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವೆಂಬರ್.1 ರಂದು ಸಂಜೆ ಕಾರ್ಯಕ್ರಮ ಆರಂಭವಾಗಲಿದ್ದು ಸಿಂಗಾರಿ ಸುಲೈಮಾನ್ ಹಾಜಿ ನಾರ್ಶ ಧ್ವಜಾರೋಹಣ ನೆರವೇರಿಸುವರು. ಬೊಳ್ಮಾರು ಅಬೂಬಕ್ಕರ್ ಮುಸ್ಲಿಯಾರ್ ನೇತ್ರತ್ವದಲ್ಲಿ ಸುರಿಬೈಲು ಉಸ್ತಾದರ ಮಖ್ಬರ ಝಿಯಾರತ್, ಪೊಯ್ಯತ್ತಬೈಲ್ ಅಬ್ದುಲ್ ಮಜೀದ್ ಫೈಝಿ ನೇತೃತ್ವದಲ್ಲಿ ಶಾದುಲಿ ರಾತೀಬು, ಸಯ್ಯಿದ್ ಅತಾವುಲ್ಲಾ ತಂಙಲ್ ಉದ್ಯಾವರ ನೇತ್ರತ್ವದಲ್ಲಿ ಆತ್ಮೀಯ ಸಂಗಮ ಹಾಗೂ ನೌಫಲ್ ಸಖಾಫಿ ಕಳಸ ಇವರಿಂದ ಮುಖ್ಯ ಭಾಷಣ ನಡೆಯಲಿದೆ.

ನ. 2 ರಂದು ಸಯ್ಯಿದ್ ಕೆ.ಎಸ್.ಆಟಕೋಯ ತಂಙಲ್ ಕುಂಬೋಳ್ ನೇತೃತ್ವದಲ್ಲಿ ಖತಮುಲ್ ಬುಖಾರಿ ಮಜ್ಲಿಸ್, ಸ್ಥಾನ ವಸ್ತ್ರ ವಿತರಣೆ, ಕಾಂತಪುರಂ ಅಬ್ದುಲ್ ಲತೀಫ್ ಸಖಾಫಿ ನೇತೃತ್ವದಲ್ಲಿ ಮದನೀಯ ಮಜ್ಲಿಸ್, ಸಯ್ಯಿದ್ ಇಬ್ರಾಹಿಂ ಪೂಕುಂಞ ತಂಙಲ್ ಉದ್ಯಾವರ ನೇತ್ರತ್ವದಲ್ಲಿ ಜಲಾಲಿಯ ರಾತೀಬು, ಸಯ್ಯಿದ್ ನೂರ್ ಸಾದಾತ್ ತಂಙಳ್ ರಿಂದ ಸಮಾಪನಾ ಪ್ರಾರ್ಥನೆ ನಡೆಯಲಿದೆ.

ನ. 3 ರಂದು ಮಹಮೂದುಲ್ ಫೈಝಿ ವಾಲೆಮುಂಡೇವು ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಸಯ್ಯಿದ್ ಅಸ್ಸಖಾಫ್ ಆದೂರ್ ತಂಙಳ್, ಝೈನುಲ್ ಉಲಮಾ ಮಾಣಿ ಉಸ್ತಾದ್, ಸಯ್ಯಿದ್ ಇಬ್ರಾಹಿಂ ಖಲೀಲ್ ಬುಖಾರಿ ತಂಙಳ್ ಕಡಲುಂಡಿ, ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ, ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್, ಮಾಜಿ ಸಚಿವ ಬಿ. ರಮಾನಾಥ ರೈ, ಯೆನೆಪೋಯ ಅಬ್ದುಲ್ಲ ಕುಂಞಿ, ಯು.ಟಿ. ಇಫ್ತಿಕಾರ್, ಹಝ್ರತ್ ಫಾಝಿಲ್ ರಝ್ವಿ ಕಾವಳಕಟ್ಟೆ, ಅಬ್ದುರ್ರಶೀದ್ ಝೈನಿ, ಅಬ್ದುಲ್ಲ ಹಾಜಿ ನಳಕ, ಇಸ್ಮಾಯಿಲ್ ತಂಙಳ್ ಉಜಿರೆ, ಹುಸೈನ್ ಸಅದಿ ಕೆ.ಸಿ.ರೋಡ್, ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಹಫೀಳ್ ಸಅದಿ ಮಡಿಕೇರಿ ಹಾಗೂ ಹಾಫಿಲ್ ಸುಫಿಯಾನ್ ಸಖಾಫಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News