ಕೇಂದ್ರ ಸರ್ಕಾರವನ್ನು ಭ್ರಷ್ಟ ಎಂದು ವಿವರಿಸುವ ಪ್ರೊಮೋ ಹಾಡನ್ನು ಬಿಡುಗಡೆಗೊಳಿಸಿ ಪೇಚಿಗೀಡಾದ ಕೇರಳ ಬಿಜೆಪಿ

Update: 2024-02-22 06:42 GMT
ಸಾಂದರ್ಭಿಕ ಚಿತ್ರ (Credit: Facebook/BJP)

ತಿರುವನಂತಪುರಂ: ಕೇಂದ್ರ ಸರ್ಕಾರ ಭ್ರಷ್ಟವಾಗಿದೆ ಎಂದು ಹೇಳುವ ಪ್ರೊಮೋ ಹಾಡನ್ನು ಬಿಡುಗಡೆಗೊಳಿಸಿ ಬಿಜೆಪಿಯ ಕೇರಳ ಘಟಕ ಪೇಚಿಗೀಡಾಗಿದೆ.

ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್‌ ಅವರ ಕೇರಳ ಯಾತ್ರೆಯ ಭಾಗವಾಗಿ ಈ ವೀಡಿಯೋ ಹಾಡು ಬಿಡುಗಡೆಗೊಳಿಸಲಾಗಿತ್ತು. “ಭ್ರಷ್ಟಾಚಾರಕ್ಕೆ ಹೆಸರು ಪಡೆದಿರುವ ಕೇಂದ್ರದಲ್ಲಿರುವ ಸರ್ಕಾರವನ್ನು” ಸೋಲಿಸಬೇಕು ಎಂಬ ಸಾಲು ಈ ಹಾಡಿನಲ್ಲಿದೆ. ಒಂದೆರಡು ದಿನಗಳ ಹಿಂದೆ ಬಿಡುಗಡೆಯಾದ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಪ್ರಮಾದ ಬೆಳಕಿಗೆ ಬಂದಾಕ್ಷಣ ಹಾಡನ್ನು ವಾಪಸ್‌ ಪಡೆದುಕೊಳ್ಳಲಾಗಿದೆ.

ಈ ಬೆಳವಣಿಗೆ ಕುರಿತು ಬಿಜೆಪಿ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ. ಮೂಲಗಳ ಪ್ರಕಾರ 2014 ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಈ ಹಾಡನ್ನು ಸಿದ್ಧಪಡಿಸಲಾಗಿತ್ತು. ಆಗ ಕೇಂದ್ರದಲ್ಲಿ ಯುಪಿಎ ಸರ್ಕಾರವಿತ್ತು.

ಈಗ ಉಂಟಾಗಿರುವ ಪ್ರಮಾದ ಕುರಿತಂತೆ ಬಿಜೆಪಿಯ ರಾಜ್ಯ ನಾಯಕತ್ವ ಸಂಬಂಧಿತರಿಂದ ವಿವರಣೆ ಕೇಳಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News