“ಜೀವನದಲ್ಲಿ ಎದೆಗುಂದಬೇಡಿ”: ತಮ್ಮ ಸೋಲಿನ ನಂತರ 4 ಕಾರ್ಯಕರ್ತರ ಆತ್ಮಹತ್ಯೆ ಕುರಿತಂತೆ ನೋವಿನಿಂದ ನುಡಿದ ಬಿಜೆಪಿ ನಾಯಕಿ ಪಂಕಜಾ ಮುಂಡೆ

Update: 2024-06-17 12:29 GMT

ಪಂಕಜಾ ಮುಂಡೆ| PTI

ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿನ ಬಳಿಕ ಆಘಾತದಿಂದ ಆತ್ಮಹತ್ಯೆ ಮಾಡಿಕೊಂಡ ಪಕ್ಷದ ನಾಲ್ಕು ಕಾರ್ಯಕರ್ತರ ದುಃಖತಪ್ತ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿರುವ ಬಿಜೆಪಿ ನಾಯಕಿ ಪಂಕಜಾ ಮುಂಡೆ, “ಜೀವನದಲ್ಲಿ ಯಾವತ್ತೂ ಎದೆಗುಂದಬೇಡಿ” ಎಂದು ತಮ್ಮ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

“ನನ್ನ ಕಾರ್ಯಕರ್ತರು ನನಗೆ ಮುಖ್ಯ. ದಯವಿಟ್ಟು ಇಂತಹ ಕ್ರಮಕ್ಕೆ ಮುಂದಾಗಬೇಡಿ, ನಿಮ್ಮ ಮಕ್ಕಳೂ, ಕುಟುಂಬವನ್ನು ಈ ರೀತಿ ದೂರ ಮಾಡಬೇಡಿ,” ಎಂದು ಅವರು ವಿನಂತಿ ಮಾಡಿದರು.

ಪಂಕಜಾ ಮುಂಡೆ ಅವರು ಆತ್ಮಹತ್ಯೆಗೈದ ಪಕ್ಷದ ಕಾರ್ಯಕರ್ತರಾದ ಪೋಪಟ್‌ರಾವ್‌ ವೈಭಸೆ, ಸಚಿನ್‌ ಮುಂಡೆ, ಪಾಂಡುರಂಗ್‌ ಸೋನಾವಣೆ ಮತ್ತು ಗಣೇಶ್‌ ಬಡೆ ಅವರ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಮೃತರ ಪೈಕಿ ಒಬ್ಬರ ಕುಟುಂಬ ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ರವಿವಾರ ಭಾಗವಹಿಸಿದರು.

ಬೀಡ್‌ ಲೋಕಸಭಾ ಕ್ಷೇತ್ರದಲ್ಲಿ ಪಂಕಜಾ ಅವರು ಎನ್‌ಸಿಪಿ (ಶರದ್‌ ಪವಾರ್)‌ನ ಬಜರಂಗ್‌ ಸೋನಾವಣೆ ಅವರೆದುರು ಸೋತಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News