ಕಾಶ್ಮೀರ ಕಣಿವೆಯಲ್ಲಿ ಭೂಕುಸಿತ | ಸಂಪರ್ಕ ಕಡಿದುಕೊಂಡ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿ

Update: 2024-08-04 15:19 GMT

PC : PTI 

ಶ್ರೀನಗರ : ಕಾಶ್ಮೀರ ಕಣಿವೆಯ ಗಂಧೇರ್ ಬಾಲ್ ಜಿಲ್ಲೆಯಲ್ಲಿರುವ ಚೆರ್ವಾನ್ ಪಾಡಬಲ್ ಪ್ರದೇಶದ ಸಮೀಪ ರವಿವಾರ ಮೇಘಸ್ಪೋಟದಿಂದಾಗಿ ಸರಣಿ ಭೂಕುಸಿತಗಳುಂಟಾಗಿದ್ದು, ಆಯಕಟ್ಟಿನ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯು ಸಂಪರ್ಕ ಕಡಿದುಕೊಂಡಿದೆ.

ಪರಿಸ್ಥಿತಿಯು ನಿಯಂತ್ರಣಕ್ಕೆ ಬರುವವರೆಗೆ ಹಾಗೂ ಹೆದ್ದಾರಿಯು ಪ್ರಯಾಣಕ್ಕೆ ಸುರಕ್ಷಿತವೆಂದು ಘೋಷಿಸಲ್ಪಡುವ ತನಕ ಭೂಕುಸಿತ ಸಂಭವಿಸಿದ ಸ್ಥಳಗಳಿಂದ ದೂರವಿರುವಂತೆ ಸ್ಥಳೀಯ ನಿವಾಸಿಗಳು ಹಾಗೂ ಪ್ರವಾಸಿಗರಿಗೆ ಜಿಲ್ಲಾಡಳಿತವು ಸೂಚಿಸಿದೆ.

ಶ್ರೀನಗರ-ಲೇಹ್ ಮಾರ್ಗವಾಗಿ ಪ್ರಯಾಣಿಸುತ್ತಿರುವ ಜನರಿಗೆ ಹಾಗೂ ಅಮರನಾಥ ಯಾತ್ರೆ ಕೈಗೊಂಡಿರುವವರಿಗೆ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಲಾಗಿದೆ ಹಾಗೂ ಜಿಲ್ಲಾಡಳಿತದಿಂದ ಮಾಹಿತಿ ಬರುವವರೆಗೆ ಕಾಯಬೇಕೆಂದು ಗಂಧೇರ್‌ಬಾಲ್ ಉಪ ವಿಭಾಗೀಯ ಮ್ಯಾಜಿಸ್ಟೇಟ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News