ದಕ್ಷಿಣ ಭಾರತದ ಹಲವು ಸ್ಥಳಗಳಲ್ಲಿ ಎನ್‌ಐಎ ದಾಳಿ

Update: 2023-12-18 15:54 GMT

ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಸೋಮವಾರ ದಕ್ಷಿಣ ಭಾರತದ 19 ಸ್ಥಳಗಳಲ್ಲಿ ದಾಳಿ ನಡೆಸಿದ್ದು, ‘‘ಅತ್ಯಂತ ಕಠಿಣ ಬೋಧನೆಗೆ ಒಳಗಾದ ಜಿಹಾದಿ ಭಯೋತ್ಪಾದಕ ಗುಂಪೊಂದನ್ನು’’ ಭೇದಿಸಿದೆ ಎಂದು ಮೂಲಗಳು ತಿಳಿಸಿವೆ.

ಸೋಮವಾರ ಬೆಳಗ್ಗೆ ದಾಳಿಗಳು ಆರಂಭವಾಗಿವೆ. ರಾಜ್ಯ ಪೊಲೀಸರ ಸಹಕಾರದೊಂದಿಗೆ ಎನ್‌ಐಎಯು ದಾಳಿಗಳನ್ನು ನಡೆಸುತ್ತಿದೆ.

ಆದರೆ, ಯಾವ ಸ್ಥಳಗಳಲ್ಲಿ ಮತ್ತು ಯಾವ ಜಿಹಾದಿ ಗುಂಪಿನ ಮೇಲೆ ದಾಳಿಗಳನ್ನು ನಡೆಸಲಾಗಿದೆ ಎಂಬ ನಿಖರ ಮಾಹಿತಿಗಳನ್ನು ಮೂಲಗಳು ನೀಡಿಲ್ಲ.

ಈ ಭಯೋತ್ಪಾದಕ ಗುಂಪು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ ಹಾಗೂ ಯುವಕರನ್ನು ನೇಮಿಸಿ ದಾಳಿಗಳನ್ನು ನಡೆಸಲು ಯೋಜಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಲಷ್ಕರೆ ತಯ್ಯಬ ಭಯೋತ್ಪಾದಕನೊಬ್ಬ ʼಕೈದಿಗಳಿಗೆ ಕಠಿಣ ಬೋಧನೆʼಗಳನ್ನು ನೀಡುತ್ತಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇತ್ತೀಚೆಗೆ ಎನ್‌ಐಎ ತಂಡವು ಬೆಂಗಳೂರಿನಲ್ಲಿ ಹಲವು ಸ್ಥಳಗಳಲ್ಲಿ ದಾಳಿ ನಡೆಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News