ಉತ್ತರ ಪ್ರದೇಶ | ಆಪರೇಷನ್ ಭೇಡಿಯ ಯಶಸ್ವಿ : ಕೊನೆಯ ತೋಳವನ್ನು ಹೊಡೆದುರುಳಿಸಿದ ಗ್ರಾಮಸ್ಥರು

Update: 2024-10-06 12:19 GMT

Photo Credit: PTI

ಬಹ್ರೈಚ್ : ಮಹ್ಸಿ ತಾಲ್ಲೂಕಿನಲ್ಲಿ ಭೀತಿ ಹುಟ್ಟಿಸಿದ್ದ ಆರು ತೋಳಗಳ ಗುಂಪಿನ ಪೈಕಿ ಬದುಕುಳಿದಿದ್ದ ಕೊನೆಯ ತೋಳವನ್ನು ತಮಚ್ ಪುರ್ ಗ್ರಾಮದ ಸ್ಥಳೀಯರು ಕೊಂದು ಹಾಕಿದ್ದಾರೆ ಎಂದು ರವಿವಾರ ಅಧಿಕಾರಿಗಳು ತಿಳಿಸಿದ್ದಾರೆ.

ರಾಮಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ತಡ ರಾತ್ರಿ ಹತ್ಯೆಗೈಯ್ಯಲಾಗಿರುವ ತೋಳವು ಹೆಣ್ಣಾಗಿದ್ದು, ಈ ಹಿಂದೆ ಶಂಕಿಸಿದ್ದಂತೆ ಕುಂಟು ತೋಳವಲ್ಲ ಎಂದು ಅವರು ಹೇಳಿದ್ದಾರೆ.

ತೋಳದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿಭಾಗೀಯ ಅರಣ್ಯಾಧಿಕಾರಿ ಅಜಿತ್ ಪ್ರತಾಪ್ ಸಿಂಗ್, “ಶನಿವಾರ ತಡರಾತ್ರಿ ನಾವು ಮೆಹ್ಸಿ ತಾಲ್ಲೂಕಿನ ರಾಮಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ತಮಚ್ ಪುರ್ ಗ್ರಾಮದಲ್ಲಿ ತೋಳವೊಂದನ್ನು ಹತ್ಯೆಗೈಯ್ಯಲಾಗಿದೆ ಎಂಬ ಮಾಹಿತಿಯನ್ನು ಸ್ವೀಕರಿಸಿದೆವು. ಸುದ್ದಿ ತಿಳಿದು ನಾವಲ್ಲಿಗೆ ಧಾವಿಸಿದಾಗ, ತೋಳ ಹಾಗೂ ಮೇಕೆಯ ಮೃತ ದೇಹ ಕಂಡು ಬಂದಿತು. ತೋಳದ ದೇಹದ ಮೇಲೆ ಗಾಯದ ಗುರುತುಗಳಿದ್ದವು. ಅದರ ದೇಹದಿಂದ ರಕ್ತ ಸೋರುತ್ತಿತ್ತು” ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News