ಮುಂಬೈ: ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Update: 2024-10-06 08:28 GMT

Photo: ANI

ಮುಂಬೈ: ಮೂವರು ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿ ಅಗ್ನಿ ದುರಂತದಲ್ಲಿ ಜೀವಂತ ದಹನವಾಗಿರುವ ಘಟನೆ ಮುಂಬೈನ ಸಿದ್ಧಾರ್ಥ್ ಕಾಲನಿಯಲ್ಲಿ ರವಿವಾರ ಬೆಳಗ್ಗೆ ನಡೆದಿದೆ.

ಮೃತರನ್ನು ಪಾರಿಸ್ ಗುಪ್ತ (7), ನರೇಂದ್ರ ಗುಪ್ತ (10), ಮಂಜು ಪ್ರೇಮ್ ಗುಪ್ತ (30), ಅನಿತಾ ಗುಪ್ತ (30), ವಿಧಿ ಚೆದಿರಾಮ್ ಗುಪ್ತ (15) ಹಾಗೂ ಗೀತಾದೇವಿ ಧರ್ಮದೇವ್ ಗುಪ್ತ (60) ಎಂದು ಗುರುತಿಸಲಾಗಿದೆ.

ಈ ಎಲ್ಲ ಸಂತ್ರಸ್ತರೂ ಒಂದೇ ಕುಟುಂಬದ ಸದಸ್ಯರು ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.

ರವಿವಾರ ಮುಂಜಾನೆ 5.20ರ ವೇಳೆಗೆ ಪೂರ್ವ ಚೆಂಬೂರ್ ನ ಎ.ಎನ್.ಗಾಯಕ್ವಾಡ್ ಮಾರ್ಗ್ ನಲ್ಲಿರುವ ಸಿದ್ಧಾರ್ಥ್ ಕಾಲನಿಯಿಂದ ಈ ಘಟನೆ ವರದಿಯಾಗಿದೆ. ಬೃಹನ್ ಮುಂಬೈ ಮಹಾನಗರಪಾಲಿಕೆಯ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಕಟ್ಟಡದ ಕೆಳ ಅಂತಸ್ತಿನಲ್ಲಿ ಮಳಿಗೆಯಿದ್ದರೆ, ಮೇಲ್ಭಾಗದಲ್ಲಿ ವಸತಿ ಗೃಹವಿತ್ತು ಎಂದು ಹೇಳಲಾಗಿದೆ.

ಕಟ್ಟಡದ ವಿದ್ಯುತ್ ತಂತಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಳಿಗೆಯ ವಿದ್ಯುತ್ ಸಾಧನಗಳ ಮೂಲಕ ಇನ್ನಿತರ ಗೃಹೋಪಯೋಗಿ ವಸ್ತುಗಳಿಗೂ ಹಬ್ಬಿದೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಾಳುಗಳನ್ನು ತಕ್ಷಣವೇ ಸರಕಾರಿ ಆಸ್ಪತ್ರೆಯಾದ ರಾಜವಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News