ಸಂಸತ್ ನಲ್ಲಿ ಹೊಗೆಬಾಂಬ್: ಭಯೋತ್ಪಾದನೆ ಆರೋಪದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು

Update: 2023-12-14 16:47 GMT

ವಿಕಾಸ್ ಶರ್ಮಾ, ಮನೋರಂಜನ್ ಡಿ., ನೀಲಂ ಹಾಗೂ ಅನಮೋಲ್

ಹೊಸದಿಲ್ಲಿ: ಸಂಸತ್‌ ಭವನದಲ್ಲಿ ಭಾರೀ ಭದ್ರತಾ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ನಾಲ್ವರು ಆರೋಪಿಗಳ ವಿರುದ್ಧ ಭಯೋತ್ಪಾದನೆಯ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳಾದ ವಿಕಾಸ್ ಶರ್ಮಾ, ಮನೋರಂಜನ್ ಡಿ., ನೀಲಂ ಹಾಗೂ ಅನಮೋಲ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ ) ಕಾಯ್ದೆಯಡಿ ಬರುವ ಭಯೋತ್ಪಾದನೆ ವಿರೋಧಿ ಕಾನೂನುಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 153 ( ಗಲಭೆಗೆ ಪ್ರಚೋದನೆ ), 120-ಬಿ (ಕ್ರಿಮಿನಲ್ ಸಂಚು), 452 (ಅತಿಕ್ರಮಣ), 186 (ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸಲು ಸಾರ್ವಜನಿಕ ಉದ್ಯೋಗಿಗೆ ಅಡ್ಡಿಪಡಿಸುವುದು) ಹಾಗೂ ಭಯೋತ್ಪಾದನೆಯ ಕೃತ್ಯಗಳ ವಿರುದ್ಧದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ, ಸಂಸತ್‌ ಭವನ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News