ಶ್ರೀನಗರ| ನದಿಯಲ್ಲಿ ಬೋಟ್ ಮುಳುಗಡೆ: 6 ಮಕ್ಕಳು ಮೃತ್ಯು‌, 10 ಮಂದಿ ನಾಪತ್ತೆ

Update: 2024-04-16 06:05 GMT

PC : NDTV 

ಶ್ರೀನಗರ: ಮಂಗಳವಾರ ಶ್ರೀನಗರದ ಝೀಲಂ ನದಿಯಲ್ಲಿ ಬೋಟ್ ಒಂದು ಮುಳುಗಡೆಯಾಗಿದ್ದು, 6 ಮಕ್ಕಳು ಮೃತಪಟ್ಟಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನದಿಯನ್ನು ದಾಟಲು ಬಳಸಲಾಗುವ ಹಗ್ಗವು ದಿಢೀರೆಂದು ತುಂಡರಿಸಿದ್ದರಿಂದ ಬೋಟ್ ಮಗುಚಿಬಿತ್ತು ಎಂದೂ ಅವರು ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಈ ಪ್ರಾಂತ್ಯದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ಬೋಟ್ ಮಗುಚಿಕೊಂಡಾಗ ಮಕ್ಕಳು ಸೇರಿದಂತೆ 20ಕ್ಕೂ ಹೆಚ್ಚು ಮಂದಿಯನ್ನು ಹೊತ್ತೊಯ್ಯುತ್ತಿತ್ತು ಎಂದು ಹೇಳಲಾಗಿದೆ. ಈ ಪೈಕಿ 10 ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ.

ನಾಪತ್ತೆಯಾಗಿರುವ ಪ್ರಯಾಣಿಕರ ಶೋಧಕ್ಕಾಗಿ ರಾಜ್ಯ ವಿಪತ್ತು ಪರಿಹಾರ ಪಡೆಯು ರಕ್ಷಣಾ ಕಾರ್ಯಾಚರಣೆಗೆ ಚಾಲನೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News