ಸಿಪಿ(ಐ)ಎಂ ಸೇರ್ಪಡೆಯಾಗುವಂತೆ ಪಿಣರಾಯಿ ವಿಜಯನ್ ನನಗೆ ಆಹ್ವಾನ ನೀಡಿದ್ದರು: ಕೇಂದ್ರ ಸಚಿವ ಸುರೇಶ್ ಗೋಪಿ

Update: 2024-10-11 05:39 GMT

ಸುರೇಶ್ ಗೋಪಿ (Photo: PTI)

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನನಗೆ ಸಿಪಿ(ಐ)ಎಂ ಸೇರ್ಪಡೆಯಾಗುವಂತೆ ಆಹ್ವಾನ ನೀಡಿದ್ದರು ಎಂದು ಕೇಂದ್ರ ಪೆಟ್ರೋಲಿಯಂ ರಾಜ್ಯ ಸಚಿವ ಸುರೇಶ್ ಗೋಪಿ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅವರಿಗೆ ಸಾಧ್ಯವಿದ್ದರೆ ಇದನ್ನು ನಿರಾಕರಿಸಲಿ. ನಾನು ರಾಜಕೀಯವನ್ನು ಇಷ್ಟಪಡುವುದಿಲ್ಲವಾದ್ದರಿಂದ ನಾನು ನಿಮ್ಮ ಪಕ್ಷವನ್ನು ಸೇರ್ಪಡೆಯಾಗಲಾರೆ ಎಂದು ಹೇಳಿದ್ದೆ. ಎಲ್ಲ ರಾಜಕೀಯ ನಾಯಕರಿಗೂ ನನ್ನ ಪ್ರತಿಕ್ರಿಯೆ ಇದೇ ಆಗಿತ್ತು” ಎಂದು ತಿಳಿಸಿದ್ದಾರೆ.

ನಾನು ರಾಜಕೀಯ ಪ್ರವೇಶಿಸುವುದನ್ನು ಆರಂಭದಲ್ಲಿ ಪ್ರತಿರೋಧಿಸಿದೆನಾದರೂ, ಆಗಸ್ಟ್ 2, 2014ರಂದು ನಡೆದ ಕೆಲವು ಘಟನೆಗಳು ನಾನು ರಾಜಕೀಯ ಪ್ರವೇಶಿಸುವಂತೆ ಮಾಡಿದವು ಎಂದೂ ಅವರು ಹೇಳಿದ್ದಾರೆ. ಆದರೆ, ಅವು ಯಾವ ಘಟನೆಗಳು ಎಂದು ಅವರು ವಿವರಿಸಲಿಲ್ಲ.

ಸಿಪಿ(ಐ)ಎಂ ನನಗೆ ಬೆಂಬಲ ನೀಡುವ ಪ್ರಯತ್ನ ಮಾಡಿದರೂ, ಅವರ ಪ್ರಯತ್ನಗಳು ಯಶಸ್ವಿಯಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News