ಬೆಂಗಳೂರು | ನೀರಿನ ಸಂಪ್‍ಗೆ ಬಿದ್ದು ತಾಯಿ-ಮಗು ಮೃತ್ಯು

Update: 2024-04-19 12:44 GMT

ಬೆಂಗಳೂರು : ನೀರಿನ ಸಂಪ್‍ಗೆ ಬಿದ್ದು ತಾಯಿ ಮತ್ತು ಆಕೆಯ ಮಗು ಮೃತಪಟ್ಟಿರುವ ಘಟನೆ ಇಲ್ಲಿನ ಯಲಹಂಕ ನ್ಯೂಟೌನ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಸುಗಪ್ಪ ಲೇಔಟ್ ನಿವಾಸಿ ಕವಿತಾ(30) ಮತ್ತು ಆಕೆಯ ಪುತ್ರ ಪವನ್(6) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಚೆಂದನೂರಿನ ಕವಿತಾ ತನ್ನ ಪುತ್ರನೊಂದಿಗೆ ಬೆಂಗಳೂರಿನ ಸುಗಪ್ಪ ಲೇಔಟ್‍ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಜೀವನ ನಿರ್ವಹಣೆಗೆ ಮನೆ ಸಮೀಪದ ಬೇರೆಯವರ ಮನೆಯೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು. ಅವರ ಮನೆ ಪಕ್ಕದಲ್ಲೇ ಖಾಲಿ ಜಾಗ ಇದ್ದು, 10 ಅಡಿ ಆಳದ ನೀರಿನ ಸಂಪ್ ಇದೆ.

ಕವಿತಾ ಎ.18ರ ಗುರುವಾರ ಎಂದಿನಂತೆ ಕವಿತಾ ಅವರು ಮನೆ ಕೆಲಸಕ್ಕೆ ಹೋಗಿದ್ದು, ಸಂಜೆ ಪುತ್ರ ಪವನ್ ಪಕ್ಕದ ಖಾಲಿ ಜಾಗದಲ್ಲಿ ಆಟವಾಡುವಾಗ ಆಯ ತಪ್ಪಿ 10 ಅಡಿ ಆಳದ ನೀರಿನ ಸಂಪ್‍ಗೆ ಬಿದ್ದಿದ್ದಾನೆ. ಅದನ್ನು ಗಮನಿಸಿದ ಕವಿತಾ ಕೂಡಲೇ ರಕ್ಷಣೆಗೆ ಧಾವಿಸಿದ್ದು, ಆಕೆಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಖಾಲಿ ಜಾಗದ ಮಾಲಕರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News