ಸೋಮೇಶ್ವರ: ಸಮುದ್ರ ಪಾಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ

Update: 2023-12-10 07:29 GMT

ಉಳ್ಳಾಲ: ಸಮುದ್ರ ಕಿನಾರೆಯಲ್ಲಿ ನೀರಾಟಕ್ಕಿಳಿದ ಸಂದರ್ಭದಲ್ಲಿ ಶನಿವಾರ ಸಮುದ್ರ ಪಾಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತ ದೇಹ ಸೋಮೇಶ್ವರ ಬಳಿ ರವಿವಾರ ಬೆಳಿಗ್ಗೆ ಪತ್ತೆಯಾಗಿದೆ.

ಸೋಮೇಶ್ವರದ  ಕಾಲೇಜೊಂದರ ಆರು ಮಂದಿ ವಿದ್ಯಾರ್ಥಿಗಳು ಶನಿವಾರ ಬೀಚ್ ಗೆ ತೆರಳಿದ್ದರು. ಈ ವೇಳೆ ನೀರಾಟಕ್ಕೆ ಇಳಿದಿದ್ದ ದ್ವಿತೀಯ ಪಿಯು ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಾದ ಮಂಜೇಶ್ವರ, ಕುಂಜತ್ತೂರು ಅಡ್ಕ ನಿವಾಸಿ ಯಶ್ವಿತ್ (17) ಮತ್ತು ಕುಂಜತ್ತೂರು ಮಜಲ್ ನಿವಾಸಿ ಯುವರಾಜ್(17) ಸಮುದ್ರ ದ ಅಲೆಗೆ ಸಿಲುಕಿ ಕೊಚ್ಚಿ ಕೊಂಡು ಹೋಗಿದ್ದರು.

ನಾಪತ್ತೆಯಾಗಿದ್ದ ಇಬ್ಬರ‌ ಮೃತ ದೇಹ ಪತ್ತೆಗಾಗಿ ಅಗ್ನಿ ಶಾಮಕ ದಳ ಹಾಗೂ ಉಳ್ಳಾ ಲ ಪೊಲೀಸರು ಶನಿವಾರ ರಾತ್ರಿ ವೇಳೆ ಬಟ್ಟಪ್ಪಾಡಿ,ಉಚ್ಚಿಲ ಪ್ರದೇಶದಲ್ಲಿ ಶೋಧ ನಡೆಸಿದ್ದರು. ಇವರ ಜೊತೆ ಮೊಗವೀರ ಪಟ್ನದ ಕೆಲವು ಈಜುಗಾರರು  ಶೋಧ ಕಾರ್ಯದಲ್ಲಿ ಪೊಲೀಸರ‌ ಜತೆ‌ ಕೈಜೋಡಿಸಿದ್ದರು.

ರವಿವಾರ ಬೆಳಗ್ಗೆ ಇಬ್ಬರ ಮೃತ ದೇಹಗಳು ಪತ್ತೆಯಾಗಿದ್ದು, ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.  

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News