ಹಾವೇರಿ | ಪಂಪ್‌ಸೆಟ್‌ ದುರಸ್ತಿ ಮಾಡುವಾಗ ವಿದ್ಯುತ್‌ ಆಘಾತ : ತಂದೆ-ಮಗ ಮೃತ್ಯು

Update: 2024-08-07 09:43 GMT

ವಿದ್ಯುತ್‌ ಆಘಾತದಿಂದ ತಂದೆ-ಮಗ ಮೃತ್ಯು

ಹಾವೇರಿ: ಜಮೀನಿನಲ್ಲಿ ಪಂಪ್‌ಸೆಟ್‌ ದುರಸ್ತಿ ಮಾಡಲು ಹೋಗಿ ವಿದ್ಯುತ್ ತಗುಲಿ ತಂದೆ-ಮಗ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಪತ್ತೇಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.

ಭತ್ತದ ಬೆಳೆಗೆ ನೀರು ಹಾಯಿಸಲು ಮೋಟಾರು ಸ್ಟಾರ್ಟ್ ಮಾಡಲು ಹೋದಾಗ ಈ ದುರ್ಘಟನೆ ಸಂಭವಿಸಿದ್ದು, ವಿದ್ಯುತ್‌ ಆಘಾತದಿಂದ ತಂದೆ-ಮಗ ಪಂಪಸೇಟ್ ಮೇಲೆಯೇ ಬಿದ್ದು ಮೃತಪಟ್ಟಿದ್ದಾರೆ. ಮೃತರನ್ನು ಕರಬಸಪ್ಪ‌ ಕಡೇನಾಯಕನಹಳ್ಳಿ(50) ಹಾಗೂ ಅವರ ಮಗ ದರ್ಶನ (26) ಎಂದು ಗುರುತಿಸಲಾಗಿದೆ. 

ಹಲಗೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News