ಕಲಬುರಗಿ | ಅ.20ರಂದು ಕಾಮ್ರೇಡ್ ಮಾರುತಿ ಮಾನ್ಪಡೆ ಸಂಸ್ಮರಣೆ ಕಾರ್ಯಕ್ರಮ

Update: 2024-10-18 08:58 GMT

ದಿವಂಗತ ಕಾಮ್ರೇಡ್ ಮಾರುತಿ ಮಾನ್ಪಡೆ

ಕಲಬುರಗಿ: ಅ.20ರಂದು ಕಲಬುರಗಿಯಲ್ಲಿ ದಿವಂಗತ ಕಾಮ್ರೇಡ್ ಮಾರುತಿ ಮಾನ್ಪಡೆ ಅವರ ನಾಲ್ಕನೆಯ ವರ್ಷದ ಸಂಸ್ಮರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಮುಖಂಡ ಚಂದು ಜಾಧವ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼಅ.20ರಂದು ಕಾಮ್ರೇಡ್ ಮಾರುತಿ ಮಾನ್ಪಡೆ ಅಭಿಮಾನಿಗಳ ಸಂಘದ ನೇತೃತ್ವದಲ್ಲಿ ನಗರದ ಚೆಂಬರ್ ಆಫ್ ಕಾಮರ್ಸ್‌ನಲ್ಲಿ ದಿ.ಕಾಮ್ರೇಡ್ ಮಾರುತಿ ಮಾನ್ಪಡೆ ಅವರ ನಾಲ್ಕನೆಯ ವರ್ಷದ ಸಂಸ್ಮರಣೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಅಂದು ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ರೈತ ಮುಖಂಡರಾದ ಬಂಡಯ್ಯಾ ಸ್ವಾಮಿ, ಶಾಸಕ ಬಿ.ಆರ್.ಪಾಟೀಲ್, ಹಿರಿಯ ಪತ್ರಕರ್ತ ಟಿ.ವಿ ಶಿವಾನಂದನ್ ಸೇರಿದಂತೆ ಅನೇಕ ಗಣ್ಯರು, ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸುನೀಲ್ ಮಾನ್ಪಡೆ, ಬಾಬುರಾವ್ ಧುತ್ತರಗಾಂವ್, ಸಾಯಬಣ್ಣ ನಿಂಬಾಳ, ಸೋಮಶೇಖರ್ ಸಿಂಘೆ ಸೇರಿದಂತೆ ಅನೇಕರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News