ಕಲಬುರಗಿ: ಅಣ್ಣನ ಪ್ರೀತಿಯ ವಿವಾದ ತಮ್ಮನ ಕೊಲೆಯಲ್ಲಿ ಅಂತ್ಯ

Update: 2024-09-22 06:09 GMT

ಕಲಬುರಗಿ: ಅಣ್ಣನ ಪ್ರೀತಿಯ ವಿವಾದದಲ್ಲಿ ತಮ್ಮನ ಕೊಲೆಯಾಗಿರುವ ಘಟನೆ ಗುಲ್ಬರ್ಗಾ ವಿಶ್ವ ವಿದ್ಯಾಲಯದ ಪೊಲೀಸ್ ಠಾಣೆ ವ್ಯಾಪ್ತಿಯ ನಾಗನಹಳ್ಳಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ನಾಗನಹಳ್ಳಿ ನಿವಾಸಿ ಸುಮೀತ್ ಮಲ್ಲಾಬಾದಿ (18) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಶುಕ್ರವಾರವಷ್ಟೇ ಮುಂಬೈಯಿಂದ ಕಲಬುರಗಿಗೆ ಮರಳಿದ್ದ ಎಂದು ತಿಳಿದುಬಂದಿದೆ. 

ಸುಮೀತ್ ಅವರ ಅಣ್ಣ ಸಚಿನ್ ನೆರೆಮನೆಯ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗುತ್ತಿದ್ದು, ಇದನ್ನು ಸಹಿಸದ ಯುವತಿಯ ಸಹೋದರರು ಸುಮೀತ್ ಅವರ ಮನೆಗೆ ಬಂದು ಜಗಳ ಶುರುಮಾಡಿದ್ದರು.‌ ಜಗಳ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದು ಸುಮೀತ್ ಹತ್ಯೆ ಮಾಡಿದ್ದಾರೆ ತಿಳಿದುಬಂದಿದೆ.

ಈ ಬಗ್ಗೆ ಮೃತ ಯುವಕನ ಪೋಷಕರು ಕಲಬುರಗಿ ವಿವಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News