ಕಲಬುರಗಿ: ಖಡ್ಗ ಹಿಡಿದು ಅರೆಬೆತ್ತಲೆಯಾಗಿ ಗ್ರಾಮದಲ್ಲಿ ಓಡಾಡಿ ಆತಂಕ ಸೃಷ್ಟಿಸಿದ ಯುವಕ

Update: 2024-09-14 18:24 GMT

ಕಲಬುರಗಿ: ಅರೆಬೆತ್ತಲೆಯಾಗಿ ಕೈಯಲ್ಲಿ ಖಡ್ಗ ಹಿಡಿದುಕೊಂಡು ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸಿರುವ ಘಟನೆ ಸೇಡಂ ತಾಲ್ಲೂಕಿನ ತೋಟ್ನಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದ್ದು, ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತೋಟ್ನಳ್ಳಿ ಗ್ರಾಮದ ಮಲ್ಲಪ್ಪ ಬಂಧಿತ ಯುವಕ. ಮದ್ಯವ್ಯಸನಿಯಾಗಿದ್ದ ಈತ, ಕುಡಿದ ನಶೆಯಲ್ಲಿ ಅರೆಬೆತ್ತಲೆಯಾಗಿ ಹಾಕಿಕೊಂಡು ಕೈಯಲ್ಲಿ ಖಡ್ಗ ಹಿಡಿದು ಗ್ರಾಮದ ತುಂಬೆಲ್ಲ ಓಡಾಡಲಾರಂಭಿಸಿದ. ಆತನನ್ನು ಹಿಡಿಯಲು ಗ್ರಾಮಸ್ಥರು ಹಿಂಜರಿದರು. ನಂತರ ಪೋಲಿಸರು ಆತನನ್ನು ಬಂಧಿಸಿ, ಖಡ್ಗವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಗ್ರಾಮದಲ್ಲಿ ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಗ್ರಾಮದ ಕೆಲ ಯುವಕರ ಮಧ್ಯೆ ಗಲಾಟೆಯ ಬೆನ್ನಲ್ಲೇ ಯುವಕ ಮಲ್ಲಪ್ಪ ಖಡ್ಗ ಹಿಡಿದು ಅರೆಬೆತ್ತಲೆಯಾಗಿ ಓಡಾಟ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News