ಸರಕಾರಿ ನೌಕರರ ಸಂಘದ ಚುನಾವಣೆ: ಶಿವಪುತ್ರ ಕರಣಿಕ ಪ್ಯಾನೆಲ್ ವತಿಯಿಂದ ನಾಮಪತ್ರ ಸಲ್ಲಿಕೆ

Update: 2024-10-18 05:25 GMT

ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಶಹಾಬಾದ ತಾಲೂಕು ಘಟಕಕ್ಕೆ 2024-29ನೇ ಸಾಲಿಗೆ ಅ. 28 ರಂದು ಚುನಾವಣೆ ನಡೆಯಲಿದ್ದು,  ಶಿವಪುತ್ರ ಕರಣಿಕ ಪ್ಯಾನೆಲ್ ವತಿಯಿಂದ ಶಿಕ್ಷಣ ಇಲಾಖೆಯ ಪ್ರೌಢ ಶಾಲಾ ವಿಭಾಗದಿಂದ ವೆಂಕಟೇಶ ಚಿನ್ನೂರ ಮತ್ತು ಮಾರುತಿ ಪೂಜಾರಿ ನಾಮಪತ್ರ ಸಲ್ಲಿಸಿದರು.

ಪ್ರಾಥಮಿಕ ಶಾಲಾ ವಿಭಾಗದಿಂದ ಶಿವಪುತ್ರ ಕರಣಿಕ, ಬನ್ನಪ್ಪ ಎನ್, ಸುಲೋಚನಾ ಜಾಧವ ಮತ್ತು ರಿಯಾನ ಪರವೀನ್ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧೆ ಬಯಸಿ ಶಿಕ್ಷಣ ಇಲಾಖೆಯ ಸಿಬ್ಬಂದಿಯೊಂದಿಗೆ ಚುನಾವಣಾಧಿಕಾರಿ ರಮೇಶ ತಳಂಗೆ ಹಾಗೂ ಹಾಜಪ್ಪ ಬಿಳಾರ ಅವರಿಗೆ ಗುರುವಾರ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಂಜಯ ರಾಠೋಡ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಚಿದಾನಂದ ಕುಡ್ಡನ, ಚನ್ನಬಸಪ್ಪ ಕೊಲ್ಲೂರ, ಶಿವಲಿಂಗಪ್ಪ ಹೆಬ್ಬಾಳ, ನಜೀರ ಮುಲ್ಲಾ, ಗಿರಿಮಲ್ಲಪ್ಪ ವಳಸಂಗ, ಗಣೇಶ ಜಾಯಿ, ಶಿವಯೋಗಿ ಕಟ್ಟಿ, ಅರುಣ ಸೂಲದವರ, ಉದಯ ಕುಮಾರ, ಮಹಾದೇವ ಕೋಟಾರೆ, ಸುರೇಶ ಕಾಂಬಳೆ, ರಾಜಕುಮಾರ ಸೇರಿದಂತೆ ಶಿಕ್ಷಣ ಇಲಾಖೆಯ ಸಿಬ್ಬಂದಿ ಸೇರಿದಂತೆ ಮತ್ತಿತರ ನೌಕರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News