ಕಾರ್ಕಳ: ರಸ್ತೆ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಯ ಕುಟುಂಬಕ್ಕೆ ಪರಿಹಾರ

Update: 2024-08-31 07:10 GMT

ಸಾಂದರ್ಭಿಕ ಚಿತ್ರ (freepik)

ಕಾರ್ಕಳ : ಬಸ್ಸು ಅಪಘಾತದಲ್ಲಿ ಮೃತಪಟ್ಟ ನಿಟ್ಟೆ ಕಾಲೇಜ್ ವಿದ್ಯಾರ್ಥಿ  ಜನಿತ್ ಶೆಟ್ಟಿ ಮನೆಗೆ ಬಸ್ ಮಾಲಕರ ಸಂಘದ ಪದಾಧಿಕಾರಿಗಳು ಹಾಗೂ ಬಸ್ಸಿನ ಏಜೆಂಟರು ನಿರ್ವಾಹಕರು ಭೇಟಿ ನೀಡಿ ಮೃತ ವಿದ್ಯಾರ್ಥಿಯ ಮನೆಯವರಿಗೆ ಸಂತಾಪ ಸೂಚಿಸಿ ಸಂಘದ ವತಿಯಿಂದ ಧನ ಸಹಾಯ ನೀಡಿ ಸಹಕರಿಸಿದರು.

ಈ ಸಂದರ್ಭದಲ್ಲಿ ಬಸ್ಸಿನ ಮಾಲಕ ಗೋಪಿನಾಥ್ ಭಟ್ ಮುನಿಯಾಲು , ರಹೀಂ ಎಣ್ಣೆ ಹೊಳೆ, ರೋಟರಿ ಕ್ಲಬ್ ನ ಅಧ್ಯಕ್ಷ ಇಕ್ಬಾಲ್ ಅಹಮದ್,  ಬಸ್ ಏಜೆಂಟರ ಬಳಗದ ಗೌರವ ಅಧ್ಯಕ್ಷ ಸುರೇಶ್ ದೇವಾಡಿಗ ಮಾಜಿ ಅಧ್ಯಕ್ಷ ಸದಾನಂದ ನಾಯಕ್, ರಾಜೇಶ್ ಹಾಗೂ ಮಾಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಜಿತ್ ಹೆಗಡೆಯವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News