ಕೊಪ್ಪಳ | ಶೀಲ ಶಂಕಿಸಿ ಪತ್ನಿಯ ಕೊಲೆ: ಆರೋಪಿ ಪತಿಯ ಬಂಧನ

Update: 2024-09-08 06:35 GMT

 ಗೀತಾ | ದೇವರೆಡ್ಡೆಪ್ಪ

ಕೊಪ್ಪಳ: ಶೀಲ ಶಂಕಿಸಿ ಪತ್ನಿಯನ್ನು ಪತಿಯು ಹತ್ಯೆ ಮಾಡಿರುವ ಘಟನೆ ಕುಕನೂರು ತಾಲೂಕಿನ ಅರಕೇರಿ ಗ್ರಾಮದಲ್ಲಿ ಕಳೆದ ನಡೆದಿರುವುದು ವರದಿಯಾಗಿದೆ.

ಅರಕೇರಿ ಗ್ರಾಮ ನಿವಾಸಿ ಗೀತಾ ಭಾವಿಕಟ್ಟಿ ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿ ಗೀತಾರ ಪತಿ ದೇವರೆಡ್ಡೆಪ್ಪ ಬಾವಿಕಟ್ಟಿ ಹಾಗೂ ಕೊಲೆಗೆ ಸಹಕರಿಸಿದ ಆರೋಪದಲ್ಲಿ ಆತನ ತಂದೆ ಮಲ್ಲಾರಡ್ಯಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಗೀತಾ ಭಾವಿಕಟ್ಟಿಯ ಶೀಲ ಶಂಕಿಸಿ ಶನಿವಾರ ರಾತ್ರಿ 1 ಗಂಟೆ ಸುಮಾರಿಗೆ ಪತಿ ದೇವರೆಡ್ಡೆಪ್ಪ ಬಾವಿಕಟ್ಟಿ ಆಕೆಯ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಬಳಿಕ ಆರೋಪಿ ಕೃತ್ಯವನ್ನು ಮುಚ್ಚಿಹಾಕಲು ತನ್ನ ತಂದೆ ಮಲ್ಲಾರಡ್ಯಪ್ಪನ ಸಹಕಾರದಲ್ಲಿ ತಡರಾತ್ರಿಯೇ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ ಎಂದು ಮೃತರ ಸಹೋದರ ಕುಕನೂರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕುಕನೂರು ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News