ಮೈಸೂರು: ಸಾಲ ಪಡೆದವರು ವಾಪಸ್ ಕೊಡದಿದ್ದಕ್ಕೆ ದಂಪತಿ ಆತ್ಮಹತ್ಯೆ

Update: 2024-02-01 17:05 GMT

ಮೈಸೂರು: ಸಾಲ ಪಡೆದವರು ಅದನ್ನು ಮರಳಿಸಲಿಲ್ಲವೆಂದು ಮನನೊಂದ ಯರಗನಹಳ್ಳಿ ನಿವಾಸಿಗಳಾದ ವಿಶ್ವನಾಥ್ (30), ಸುಶ್ಮಿತಾ (25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಶ್ವನಾಥ್ ತರಕಾರಿ ವ್ಯಾಪಾರ ಮಾಡುತ್ತಿದ್ದರು. ತನ್ನ ಮೂಲಕ ಶಿವು ಎಂಬಾತನಿಗೆ ಬೇರೊಬ್ಬರಿಂದ 5 ಲಕ್ಷ ಸಾಲ ಕೊಡಿಸಿದ್ದರು. ಆದರೆ, ಆತ ಸಾಲ ಪಾವತಿಸಿರಲಿಲ್ಲ. ಈ ಬಗ್ಗೆ ಸಾಲ ಕೊಟ್ಟವರು ಮರುಪಾವತಿಸುವಂತೆ ವಿಶ್ವನಾಥ್ ಅವರಿಗೆ ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ.

ಅಲ್ಲದೆ, ವಿಶ್ವನಾಥ್ ಅವರು ಚೋರನಹಳ್ಳಿ ರಾಜಣ್ಣ ಅವರಿಗೆ ಚಿನ್ನಾಭರಣ ಕೊಟ್ಟಿದ್ದರು. ಆತ ಆ ಚಿನ್ನವನ್ನು ವಾಪಸ್ ಕೊಡದೇ ಸತಾಯಿಸುತ್ತಿದ್ದ. ಇದರಿಂದ ಬೇಸತ್ತ ದಂಪತಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿಬಿಟ್ಟು ಆಲನಹಳ್ಳಿಯ ವರ್ತುಲ ರಸ್ತೆಯಲ್ಲಿರುವ ಲಾಡ್ಜ್ ಒಂದರಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News