ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರುವ ವೇಳೆ ಹಳಿಗೆ ಬಿದ್ದ ಬಿಜೆಪಿ ಶಾಸಕಿ!

Update: 2024-09-17 02:35 GMT

PC: screengrab/X.com

ಹೊಸದಿಲ್ಲಿ: ಆಗ್ರಾ ಕಂಟೋನ್ಮೆಂಟ್ ಮತ್ತು ಬನಾರಸ್ ನಡುವಿನ ವಂದೇಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡುವ ಸಂದರ್ಭ ಎಥವಾ ಜಂಕ್ಷನ್ ನಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ಶಾಸಕಿ ಸರಿತಾ ಭಡೋರಿಯಾ ತಳ್ಳಾಟದಲ್ಲಿ ರೈಲು ಹಳಿಗೆ ಬಿದ್ದ ಘಟನೆ ವರದಿಯಾಗಿದೆ. ಆದರೆ ಅಪಾಯದಿಂದ ಪಾರಾಗಿದ್ದಾರೆ.

ಪ್ಲಾಟ್ ಫಾರಂನಲ್ಲಿ ಆದ ಗೊಂದಲದಲ್ಲಿ ಭದ್ರತಾ ಸಿಬ್ಬಂದಿ ನಿಯಂತ್ರಣ ಕಳೆದುಕೊಂಡ ಕಾರಣ ಭಡೋರಿಯಾ ರೈಲು ಹಳಿಗೆ ಬೀಳಬೇಕಾಯಿತು. ಭದ್ರತಾ ಸಿಬ್ಬಂದಿ ಮತ್ತು ಪಕ್ಷದ ಕಾರ್ಯಕರ್ತರು ತಕ್ಷಣ ನೆರವಿನ ಹಸ್ತ ಚಾಚಿ ಪ್ಲಾಟ್ ಫಾರಂಗೆ ಶಾಸಕಿಯನ್ನು ಎಳೆದುಕೊಂಡರು. ಇದರಿಂದಾಗಿ ಬಳಿಕ ಸಮಾರಂಭ ಸುಲಲಿತವಾಗಿ ನಡೆಯಿತು.

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ಭುಜ್- ಅಹ್ಮದಾಬಾದ್ ನಡುವೆ ಭಾರತದ ಮೊಟ್ಟಮೊದಲ ವಂದೇ ಮೆಟ್ರೋ ಸೇವೆಗೆ ಚಾಲನೆ ನೀಡಿದರು. ಜೊತೆಗೆ ನಾಗ್ಪುರ-ಸಿಕಂದರಾಬಾದ್, ಕೊಲ್ಹಾಪುರ-ಪುಣೆ, ಆಗ್ರಾ-ಕಂಟೋನ್ಮೆಂಟ್ ಬನಾರಸ್, ದುರ್ಗ್- ವಿಶಾಖಪಟ್ಟಣಂ, ಪುಣೆ-ಹುಬ್ಬಳ್ಳಿ ಮತ್ತು ವಾರಣಾಸಿ- ದೆಹಲಿ ನಡುವಿನ ಮೊಟ್ಟಮೊದಲ 20 ಬೋಗಿಗಳ ವಂದೇಭಾರತ್ ರೈಲುಗಳಿಗೂ ಚಾಲನೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News