ಲೋಕಸಭೆ ಚುನಾವಣೆಯಲ್ಲಿ ಬಿಎಸ್ಪಿ ಏಕಾಂಗಿ ಸ್ಪರ್ಧೆ: ಮಾಯಾವತಿ

Update: 2024-01-15 15:41 GMT

ಲಕ್ನೊ : ಮುಂದಿನ ಲೋಕಸಭೆ ಚುನಾವಣೆಯಲ್ಲಿ ತನ್ನ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ನಾಯಕಿ ಮಾಯಾವತಿ ಸೋಮವಾರ ಪುನರುಚ್ಛರಿಸಿದ್ದಾರೆ.

‘‘ಮೈತ್ರಿಯಿಂದ ನಾವು ಸಾಕಷ್ಟ ನಷ್ಟ ಮಾಡಿಕೊಂಡಿದ್ದೇವೆ. ನಷ್ಟ ಉಂಟು ಮಾಡುವುದಕ್ಕೇ ದೇಶದ ಹೆಚ್ಚಿನ ಪಕ್ಷಗಳು ಬಿಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಯಸುತ್ತಿವೆ’’ ಎಂದು ಮಾಯಾವತಿ ಆರೋಪಿಸಿದ್ದಾರೆ. ಆದರೆ, ಚುನಾವಣೆಯ ನಂತರ ಮೈತ್ರಿ ಕುರಿತು ಪರಿಶೀಲಿಸಲಾಗುವುದು ಎಂದು ಅವರು ಹೇಳಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಪಕ್ಷದ ನಿರ್ಧಾರವನ್ನು ಮಾಯಾವತಿ ಅವರು ಕಳೆದ ವರ್ಷ ಆಗಸ್ಟ್ 30ರಂದು ಮೊದಲ ಬಾರಿಗೆ ಘೋಷಿಸಿದ್ದರು. ಪಕ್ಷ ತನ್ನ ನಿಲುವಿಗೆ ಬದ್ಧವಾಗಿದೆ ಎಂದು ಅವರು ಡಿಸೆಂಬರ್ 1ರಂದು ಪುನರುಚ್ಛರಿಸಿದ್ದರು

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News