ಕಾಶ್ಮೀರ: ಶಂಕಿತ ಉಗ್ರರಿಂದ ಗುಂಡು ಹಾರಿಸಿ ವಲಸೆ ಕಾರ್ಮಿಕನ ಹತ್ಯೆ

Update: 2023-10-30 15:41 GMT

Photo: Pexels

ಶ್ರೀನಗರ: ವಲಸೆ ಕಾರ್ಮಿಕರೋರ್ವರನ್ನು ಶಂಕಿತ ಉಗ್ರರು ಗುಂಡು ಹಾರಿಸಿ ಹತ್ಯೆಗೈದ ಘಟನೆ ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಸೋಮವಾರ ನಡೆದಿದೆ.

ಮೃತಪಟ್ಟ ವಲಸೆ ಕಾರ್ಮಿಕನನ್ನು ಉತ್ತರಪ್ರದೇಶದ ನಿವಾಸಿ ಮಹೇಶ್ ಎಂದು ಪೊಲೀಸರು ಗುರುತಿಸಿದ್ದಾರೆ. ಕಾಶ್ಮೀರದಲ್ಲಿ ವಲಸೆ ಕಾರ್ಮಿಕ ಹತ್ಯೆಯಾಗುತ್ತಿರುವುದು ಈ ವರ್ಷ ಇದೇ ಮೊದಲು.

‘‘ ಪುಲ್ವಾಮದ ತುಮ್ಚಿ ನೌಪೋರಾ ಪ್ರದೇಶದಲ್ಲಿ ಉತ್ತರಪ್ರದೇಶದ ವಲಸೆ ಕಾರ್ಮಿಕ ಮುಖೇಶ್ ಮೇಲೆ ಉಗ್ರರು ಗುಂಡು ಹಾರಿಸಿದ್ದಾರೆ. ಈ ಗುಂಡಿನ ದಾಳಿಯಿಂದ ಅವರು ಗಂಭೀರ ಗಾಯಗೊಂಡರು. ಅನಂತರ ಮೃತಪಟ್ಟರು’’ ಎಂದು ಜಮ್ಮು ಹಾಗೂ ಕಾಶ್ಮೀರ ಪೊಲೀಸರು ತನ್ನ ‘x’ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News