ತುಘ್ಲಕ್‌ನಂತೆ ತಮ್ಮ ಹೆಸರುಗಳಿರುವ ಕಟ್ಟಡಗಳಿಂದಾಗಿ ಮೋದಿ ನೆನಪಿನಲ್ಲುಳಿಯುತ್ತಾರೆ: ಸುಬ್ರಮಣಿಯನ್‌ ಸ್ವಾಮಿ

Update: 2024-07-16 12:33 GMT

ಸುಬ್ರಮಣಿಯನ್ ಸ್ವಾಮಿ | PTI 

ಹೊಸದಿಲ್ಲಿ: ಮೊಘಲ್‌ ದೊರೆ ಮೊಹಮ್ಮದ್‌ ಬಿನ್‌ ತುಘ್ಲಖ್‌ ಮತ್ತು ಬ್ರಿಟಿಷ್‌ ವಸಾಹತುಶಾಹಿಗಳು ನಿರ್ಮಿಸಿದ ಕಟ್ಟಡಗಳನ್ನು ಬಳಸಲಾಗುತ್ತಿದ್ದರೂ ಅವರನ್ನು ಮರೆತಂತೆ ಪ್ರಧಾನಿ ನರೇಂದ್ರ ಮೋದಿ ಕಟ್ಟಡಗಳ ಅಡಿಗಲ್ಲುಗಳಲ್ಲಿರುವ ಅವರ ಹೆಸರಿನಿಂದಾಗಿ ನೆನಪಿನಲ್ಲುಳಿಯುತ್ತಾರೆ. ಲಡಾಖ್‌ನಲ್ಲಿ ಚೀನಾಗೆ ಶರಣಾಗಿದ್ದಕ್ಕೂ ಮೋದಿ ನೆನಪಿನಲ್ಲುಳಿಯುತ್ತಾರೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಮುಂಚೂಣಿಯಲ್ಲಿ ಉಳಿಸಿದರೆ ಬಿಜೆಪಿ “ಟೈಟಾನಿಕ್‌” ಹಡಗಿನಂತೆ ಮುಳುಗಲಿದೆ ಎಂದು ಸುಬ್ರಮಣಿಯನ್ ಸ್ವಾಮಿ ಸೋಮವಾರ ಹೇಳಿದ್ದರು. “ನಾವು ನಮ್ಮ ಬಿಜೆಪಿ ಪಕ್ಷವನ್ನು ಟೈಟಾನಿಕ್‌ ಹಡಗಿನಂತೆ ಮುಳುಗುವುದನ್ನು ನೋಡಬೇಕಾದರೆ ಮೋದಿ ನಾಯಕತ್ವ ವಹಿಸುವುದು ಅತ್ಯುತ್ತಮವಾಗಿದೆ. ಉಪಚುನಾವಣೆ ಫಲತಾಂಶಗಳನ್ನು ನೋಡಿದರೆ ಶಾಶ್ವತವಾಗಿ ಮುಳುಗಡೆಯಾಗಲು ಬಿಜೆಪಿಯಲ್ಲಿ ಬಿರುಕುಗಳು ಮೂಡುತ್ತಿವೆ,” ಎಂದು ಸ್ವಾಮಿ ಹೇಳಿದ್ದರು.

ಉಪಚುನಾವಣೆ ಫಲಿತಾಂಶಗಳಲ್ಲಿ ಇಂಡಿಯಾ ಮೈತ್ರಿಕೂಟ ಒಟ್ಟು 13ರಲ್ಲಿ 10ರಲ್ಲಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಸ್ವಾಮಿ ಅವರ ಹೇಳಿಕೆ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News