ಬಿಜೆಪಿ ತೊರೆದ ಮುಝಫ್ಪರ್ ಪುರ್ ಸಂಸದ; ಕಾಂಗ್ರೆಸ್ ಸೇರ್ಪಡೆ

Update: 2024-04-02 07:41 GMT

ಅಜಯ್ ನಿಶಾದ್ | Photo: X \ @SurrbhiM

ಪಾಟ್ನಾ: ಬಿಹಾರದ ಮುಝಫ್ಫರ್ ಪುರ್ ಸಂಸದ ಅಜಯ್ ನಿಶಾದ್ ಇಂದು (ಮಂಗಳವಾರ) ಬಿಜೆಪಿಗೆ ತಮ್ಮ ರಾಜಿನಾಮೆ ಸಲ್ಲಿಸಿದರು. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ದೊರೆಯದಿದ್ದರಿಂದ, ಅವರು ಬಿಜೆಪಿಯನ್ನು ತೊರೆಯಲು ನಿರ್ಧರಿಸಿದ್ದು, ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಕಳೆದ ವರ್ಷ ಅಜಯ್ ನಿಶಾದ್ ಅವರಿಂದ 4,09,988 ಮತಗಳಿಂದ ಪರಾಭವಗೊಂಡಿದ್ದ ಡಾ. ರಾಜ್ ಭೂಷಣ್ ಚೌಧರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ನಿಶಾದ್, “ಗೌರವಾನ್ವಿತ ಜೆಪಿ ನಡ್ಡಾ ಅವರೆ, ಬಿಜೆಪಿಯ ದ್ರೋಹದಿಂದ ಆಘಾತಗೊಂಡಿದ್ದು, ನಾನು ಪಕ್ಷದ ಎಲ್ಲ ಹುದ್ದೆಗಳು ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News