ಪಂಜಾಬ್ | ಎರಡು ರೈಲುಗಳು ಢಿಕ್ಕಿ; ಇಬ್ಬರು ಲೋಕೊಪೈಲಟ್‌ಗಳಿಗೆ ಗಾಯ

Update: 2024-06-02 10:48 GMT

PC : PTI 

ಚಂಡೀಗಢ: ರವಿವಾರ ಮುಂಜಾನೆ ದಿಲ್ಲಿ-ಅಮೃತಸರ ರೈಲ್ವೆ ಮಾರ್ಗದಲ್ಲಿ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಈ ಅಪಘಾತದಲ್ಲಿ ಇಬ್ಬರಿಗೆ ಗಾಯಗಳಾಗಿವೆ. ಗೂಡ್ಸ್ ರೈಲು ಹಳಿ ತಪ್ಪಿ, ಪ್ಯಾಸೆಂಜರ್ ರೈಲಿಗೆ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

PTI ಸುದ್ದಿ ಸಂಸ್ಥೆಯ ಪ್ರಕಾರ, ಈ ಅಪಘಾತದಲ್ಲಿ ಇಬ್ಬರು ಲೋಕೊಪೈಲಟ್‌ಗಳಿಗೆ ಗಾಯಗಳಾಗಿವೆ. ಸಿರ್ಹಿಂದ್ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಸರಕು ಸಾಗಣೆ ರೈಲಿಗೆ ಮತ್ತೊಂದು ರೈಲು ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

ಈ ಢಿಕ್ಕಿಯಿಂದ ಒಂದು ರೈಲಿನ ಎಂಜಿನ್ ಮತ್ತೊಂದು ಹಳಿಯ ಮೇಲೆ ಉರುಳಿ ಬಿದ್ದು, ಪ್ಯಾಸೆಂಜರ್ ರೈಲಿಗೆ ಢಿಕ್ಕಿ ಹೊಡೆದದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಈ ಅಪಘಾತದಲ್ಲಿ ಲೋಕೊಪೈಲಟ್‌ಗಳಾದ ವಿಕಾಸ್ ಕುಮಾರ್ ಹಾಗೂ ಹಿಮಾಂಶು ಕುಮಾರ್ ಅವರಿಗೆ ಕ್ರಮವಾಗಿ ತಲೆ ಮತ್ತು ಬೆನ್ನಿಗೆ ಗಾಯವಾಗಿದೆ ಎಂದು ಫತೇಗಢ್ ಸಾಹಿಬ್ ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಬ್ಬರನ್ನೂ ಪಟಿಯಾಲಾದ ರಾಜಿಂದರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News