ಮಣಿಪುರ ಹಿಂಸಾಚಾರದಿಂದ ರಾಷ್ಟ್ರದ ಆತ್ಮಸಾಕ್ಷಿಗೆ ಗಾಯ: ಸೋನಿಯಾ ಗಾಂಧಿ ವಿಷಾದ

Update: 2023-06-21 15:41 GMT

(Photo- PTI)

ಹೊಸದಿಲ್ಲಿ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿ ಕಾಪಾಡುವಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬುಧವಾರ ಮನವಿ ಮಾಡಿದ್ದಾರೆ.

ಮಣಿಪುರ ಹಿಂಸಾಚಾರದ ಕುರಿತು ವಿಷಾದ ವ್ಯಕ್ತಪಡಿಸಿದ ಅವರು, ʼಜನರ ಜೀವನವನ್ನು ಧ್ವಂಸಗೊಳಿಸಿರುವ ಹಿಂಸಾಚಾರವು ರಾಷ್ಟ್ರದ ಆತ್ಮಸಾಕ್ಷಿಯ ಮೇಲೆ ಆಳವಾದ ಗಾಯವನ್ನು ಉಂಟುಮಾಡಿದೆʼ ಎಂದು ಹೇಳಿದ್ದಾರೆ.

ಹಿಂಸಾಚಾರದಿಂದಾಗಿ ಜನರು ಮನೆಗಳನ್ನು ತೊರೆದು ಹೋಗುವಂತೆ ಆಗಿದೆ, ತಮ್ಮ ಜೀವಿತಾವಧಿಯಲ್ಲಿ ಅವರು ನಿರ್ಮಿಸಿದ ಎಲ್ಲವನ್ನೂ ಬಿಟ್ಟು ವಲಸೆ ಹೋಗುವುದು ಅನಿವಾರ್ಯವಾಗಿದೆ ಎಂದು ಅವರು ದುಃಖ ವ್ಯಕ್ತಪಡಿಸಿದ್ದಾರೆ.

"ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿರುವ ನಮ್ಮ ಸಹೋದರ ಸಹೋದರಿಯರು ಪರಸ್ಪರ ವಿರುದ್ಧ ತಿರುಗಿ ಬೀಳುತ್ತಿರುವುದನ್ನು ನೋಡುವುದು ಹೃದಯ ವಿದ್ರಾವಕವಾಗಿದೆ" ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಮಣಿಪುರದ ಇತಿಹಾಸವು ಎಲ್ಲಾ ಜನಾಂಗಗಳು, ಧರ್ಮಗಳು ಮತ್ತು ಹಿನ್ನೆಲೆಗಳ ಜನರನ್ನು ಅಪ್ಪಿಕೊಳ್ಳುವ ಸಾಮರ್ಥ್ಯ ಮತ್ತು ವೈವಿಧ್ಯಮಯ ಸಮಾಜದ ಅಸಂಖ್ಯಾತ ಸಾಧ್ಯತೆಗಳಿಗೆ ಸಾಕ್ಷಿಯಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

"ಭ್ರಾತೃತ್ವದ ಮನೋಭಾವವನ್ನು ಪೋಷಿಸಲು ಇದು ಅಪಾರವಾದ ನಂಬಿಕೆ ಮತ್ತು ಸದ್ಭಾವನೆ ಬೇಕಾಗುತ್ತದೆ. ಆದರೆ, ದ್ವೇಷ ಮತ್ತು ವಿಭಜನೆಯ ಜ್ವಾಲೆಯನ್ನು ಉಂಟುಮಾಡಲು ಒಂದೇ ತಪ್ಪು ಹೆಜ್ಜೆ ಸಾಕು. ಇಂದು ನಾವು ಈ ಎರಡು ಆಯ್ಕೆ ಮಾಡುವ ಪ್ರಮುಖ ಕವಲುದಾರಿಯಲ್ಲಿ ಇದ್ದೇವೆ" ಎಂದು ಅವರು ಎಚ್ಚರಿಸಿದ್ದಾರೆ.

"ಈ ಸುಂದರ ಭೂಮಿಗೆ ಸಾಮರಸ್ಯ ಮತ್ತು ಶಾಂತಿಯನ್ನು ಮರಳಿ ತರಲು ದಾರಿ ಮಾಡಿಕೊಡುವಂತೆ ನಾನು ನಾನು ಮಣಿಪುರದ ಜನರಿಗೆ ಮನವಿ ಮಾಡುತ್ತೇನೆ." ಗಾಂಧಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News