'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಇಂದಿಗೆ 10 ವರ್ಷ!

Update: 2024-09-26 05:52 GMT

ಮೇಕ್ ಇನ್ ಇಂಡಿಯಾ ಉಪಕ್ರಮದ ಭಾರೀ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ವಂದನೆ ಸಲ್ಲಿಸಲು ಇದೊಂದು ಅವಕಾಶವಾಗಿದೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಪ್ರವರ್ತಕ, ದಾರ್ಶನಿಕ ಮತ್ತು ನವೋದ್ಯಮಿಗಳಾಗಿದ್ದು, ನಿಮ್ಮ ಅವಿರತ ಪ್ರಯತ್ನಗಳು ‘ಮೇಕ್ ಇನ್ ಇಂಡಿಯಾ’ ಯಶಸ್ಸಿಗೆ ಉತ್ತೇಜನ ನೀಡಿವೆ, ಆ ಮೂಲಕ ನಮ್ಮ ದೇಶವನ್ನು ಜಾಗತಿಕ ಗಮನ ಮತ್ತು ಕುತೂಹಲದ ಕೇಂದ್ರಬಿಂದುವನ್ನಾಗಿ ಮಾಡಿವೆ. ಅವಿಶ್ರಾಂತ ಸ್ವಭಾವದ ಈ ಸಾಮೂಹಿಕ ಸ್ಫೂರ್ತಿಯೇ ಕನಸನ್ನು ಶಕ್ತಿಯುತ ಆಂದೋಲನವನ್ನಾಗಿ ಪರಿವರ್ತಿಸಿದೆ.

‘ಮೇಕ್ ಇನ್ ಇಂಡಿಯಾ’ದ ಪರಿಣಾಮವು ಭಾರತ ಅಜೇಯ ಎಂಬುದನ್ನು ತೋರಿಸುತ್ತದೆ.ಈ ಪ್ರಯತ್ನವು ಹತ್ತು ವರ್ಷಗಳ ಹಿಂದೆ ನಮ್ಮಂತಹ ಪ್ರತಿಭಾವಂತ ರಾಷ್ಟ್ರವು ಆಮದುದಾರನಾಗಿ ಮಾತ್ರ ಇರದೆ ರಫ್ತುದಾರನೂ ಆಗುವುದನ್ನು ಖಚಿತಪಡಿಸಿಕೊಳ್ಳಲು ಉತ್ಪಾದನೆಯಲ್ಲಿ ಭಾರತದ ಪ್ರಗತಿಯನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ ಪ್ರಾರಂಭವಾಯಿತು.

ಕಳೆದ ದಶಕವನ್ನು ಪ್ರತಿಬಿಂಬಿಸುವಾಗ, 140 ಕೋಟಿ ಭಾರತೀಯರ ಶಕ್ತಿ ಮತ್ತು ಕೌಶಲ್ಯವು ನಮ್ಮನ್ನು ಎಷ್ಟು ದೂರಕ್ಕೆ ಕೊಂಡೊಯ್ದಿದೆ ಎಂಬುದರ ಬಗ್ಗೆ ನಾನು ಹೆಮ್ಮೆಯಿಂದ ಬೀಗುತ್ತಿದ್ದೇನೆ. ನಾವು ಕನಸಿನಲ್ಲಿಯೂ ಯೋಚಿಸದ ಕ್ಷೇತ್ರಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ‘ಮೇಕ್ ಇನ್ ಇಂಡಿಯಾ’ ಛಾಪು ಗೋಚರಿಸುತ್ತಿದೆ.

ನಾನು ಒಂದೆರಡು ಉದಾಹರಣೆ ನೀಡುತ್ತೇನೆ....

ಮೊಬೈಲ್ ತಯಾರಿಕೆ...ಈಗ ಮೊಬೈಲ್ ಫೋನ್ ಗಳು ಎಷ್ಟು ಪ್ರಾಮುಖ್ಯತೆ ಪಡೆದಿವೆ ಎಂಬುದು ನಮಗೆ ಗೊತ್ತಿದೆ. ಆದರೆ ಆಶ್ಚರ್ಯಕರ ವಿಷಯವೆಂದರೆ 2014ರಲ್ಲಿ ಇಡೀ ದೇಶದಲ್ಲಿ ಕೇವಲ ಎರಡು ಮೊಬೈಲ್ ತಯಾರಿಕಾ ಘಟಕಗಳನ್ನು ಹೊಂದಿದ್ದೆವು. ಇಂದು, ಈ ಸಂಖ್ಯೆ 200 ಕ್ಕಿಂತ ಹೆಚ್ಚಾಗಿದೆ. ನಮ್ಮ ಮೊಬೈಲ್ ರಫ್ತು ಕೇವಲ ರೂ. 1,556 ಕೋಟಿಯಿಂದ ರೂ. 1.2 ಲಕ್ಷ ಕೋಟಿಗೆ ಭಾರೀ ಏರಿಕೆ ಕಂಡಿದೆ, ಬೆರಗುಗೊಳಿಸುವ ಶೇ.7500 ರಷ್ಟು ಬೆಳವಣಿಗೆ! ಇಂದು, ಭಾರತದಲ್ಲಿ ಬಳಸಲಾಗುವ ಶೇ.99 ರಷ್ಟು ಮೊಬೈಲ್ ಫೋನ್ ಗಳು ಮೇಡ್ ಇನ್ ಇಂಡಿಯಾ ಆಗಿವೆ. ನಾವು ವಿಶ್ವಾದ್ಯಂತ ಎರಡನೇ ಅತಿದೊಡ್ಡ ಮೊಬೈಲ್ ತಯಾರಕರಾಗಿದ್ದೇವೆ.

ನಮ್ಮ ಉಕ್ಕು ಉದ್ಯಮವನ್ನು ನೋಡಿ - ನಾವು ಸಿದ್ಧಪಡಿಸಿದ ಉಕ್ಕಿನ ನಿವ್ವಳ ರಫ್ತುದಾರರಾಗಿದ್ದೇವೆ ಮತ್ತು 2014 ರಿಂದ ಉತ್ಪಾದನೆಯು ಶೇ.50 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ನಮ್ಮ ಸೆಮಿಕಂಡಕ್ಟರ್ ತಯಾರಿಕಾ ವಲಯವು ರೂ.1.5 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಹೂಡಿಕೆಯನ್ನು ಆಕರ್ಷಿಸಿದೆ, ಐದು ಘಟಕಗಳನ್ನು ಅನುಮೋದಿಸಲಾಗಿದೆ, ಅವು ದಿನಕ್ಕೆ 7 ಕೋಟಿಗೂ ಹೆಚ್ಚು ಚಿಪ್ ಗಳ ಒಟ್ಟು ಸಾಮರ್ಥ್ಯವನ್ನು ಹೊಂದಿರುತ್ತವೆ!

ನಾವು ಜಾಗತಿಕವಾಗಿ ನವೀಕರಿಸಬಹುದಾದ ಇಂಧನದ ನಾಲ್ಕನೇ ಅತಿದೊಡ್ಡ ಉತ್ಪಾದಕರಾಗಿದ್ದೇವೆ, ಕೇವಲ ಒಂದು ದಶಕದಲ್ಲಿ ಇದರ ಸಾಮರ್ಥ್ಯವು ಶೇ.400 ರಷ್ಟು ಹೆಚ್ಚಾಗಿದೆ. 2014 ರಲ್ಲಿ ಬಹುತೇಕ ಅಸ್ತಿತ್ವದಲ್ಲಿಲ್ಲದ ನಮ್ಮ ಇಲೆಕ್ಟ್ರಿಕ್ ವಾಹನ ಉದ್ಯಮವು ಈಗ 3 ಬಿಲಿಯನ್ ಮೌಲ್ಯದ್ದಾಗಿದೆ.

ರಕ್ಷಣಾ ಉತ್ಪಾದನಾ ರಫ್ತು ರೂ.1,000 ಕೋಟಿಗಳಿಂದ ರೂ. 21,000 ಕೋಟಿಗೆ ಏರಿಕೆಯಾಗಿದ್ದು, 85ಕ್ಕೂ ಹೆಚ್ಚು ದೇಶಗಳನ್ನು ತಲುಪಿದೆ. ‘ಮನ್ ಕಿ ಬಾತ್’ಸಂಚಿಕೆಯೊಂದರಲ್ಲಿ ನಾನು ಆಟಿಕೆ ಉದ್ಯಮವನ್ನು ಪುನಶ್ಚೇತನಗೊಳಿಸುವ ಅಗತ್ಯದ ಬಗ್ಗೆ ಮಾತನಾಡಿದ್ದೆ ಮತ್ತು ಅದನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ನಮ್ಮ ಜನರು ತೋರಿಸಿದ್ದಾರೆ! ಕಳೆದ ಕೆಲವು ವರ್ಷಗಳಲ್ಲಿ, ರಫ್ತುಗಳಲ್ಲಿ ಶೇ.239 ರಷ್ಟು ಬೆಳವಣಿಗೆಯನ್ನು ನಾವು ನೋಡಿದ್ದೇವೆ. ಅಲ್ಲದೆ ಆಮದು ಅರ್ಧದಷ್ಟು ಕಡಿಮೆಯಾಗಿದೆ. ಇದು ವಿಶೇಷವಾಗಿ ನಮ್ಮ ಸ್ಥಳೀಯ ತಯಾರಕರು ಮತ್ತು ಮಾರಾಟಗಾರರಿಗೆ ಪ್ರಯೋಜನವನ್ನು ನೀಡಿದೆ. ಇದರಲ್ಲಿ ಚಿಕ್ಕ ಮಕ್ಕಳನ್ನು ಉಲ್ಲೇಖಿಸದೇ ಇರಲಾದೀತೇ!

ಇಂದಿನ ಭಾರತದ ಅನೇಕ ಗಣ್ಯ ವ್ಯಕ್ತಿಗಳು -ನಮ್ಮ ವಂದೇ ಭಾರತ್ ರೈಲುಗಳು, ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ನಮ್ಮ ಕೈಯಲ್ಲಿರುವ ಮೊಬೈಲ್ ಫೋನ್ ಗಳ- ಇವೆಲ್ಲದರ ಮೇಕ್ ಇನ್ ಇಂಡಿಯಾ ಲೇಬಲ್ ಅನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಿದ್ದಾರೆ. ಇಲೆಕ್ಟ್ರಾನಿಕ್ಸ್ ನಿಂದ ಬಾಹ್ಯಾಕಾಶ ಕ್ಷೇತ್ರದವರೆಗೆ, ಇದು ಭಾರತೀಯ ಪ್ರತಿಭೆ ಮತ್ತು ಗುಣಮಟ್ಟವನ್ನು ಪ್ರತಿನಿಧಿಸುತ್ತದೆ.

ಮೇಕ್ ಇನ್ ಇಂಡಿಯಾ ಉಪಕ್ರಮವು ವಿಶೇಷವಾಗಿದೆ. ಏಕೆಂದರೆ ಇದು ಬಡವರಿಗೆ ದೊಡ್ಡ ಕನಸುಗಳಿಗೆ ಮತ್ತು ಅವರ ಆಕಾಂಕ್ಷೆಗಳಿಗೆ ರೆಕ್ಕೆಗಳನ್ನು ನೀಡಿದೆ. ಇದು ಅವರಿಗೆ ತಾವೂ ಸಂಪತ್ತಿನ ಸೃಷ್ಟಿಕರ್ತರಾಗಬಹುದು ಎಂಬ ವಿಶ್ವಾಸವನ್ನು ನೀಡಿದೆ. ಎಂ ಎಸ್ ಎಂ ಇ ವಲಯದ ಮೇಲಿನ ಪರಿಣಾಮವು ಅಷ್ಟೇ ಗಮನಾರ್ಹವಾಗಿದೆ.

ಒಂದು ಸರಕಾರವಾಗಿ, ಈ ಮನೋಭಾವವನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ದಶಕದ ಸುದೀರ್ಘ ದಾಖಲೆಯು ಸ್ವತಃ ಇದನ್ನೇ ಹೇಳುತ್ತದೆ. ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪಿ ಎಲ್ ಐ) ಪರಿವರ್ತಕ ಯೋಜನೆಯಾಗಿದೆ. ಸಾವಿರಾರು ಕೋಟಿಗಳ ಹೂಡಿಕೆಗಳನ್ನು ಸಕ್ರಿಯಗೊಳಿಸುತ್ತಿದೆ ಮತ್ತು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ವ್ಯವಹಾರವನ್ನು ಸುಲಭಗೊಳಿಸುವಲ್ಲಿ ನಾವು ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ.

ಇಂದು ಭಾರತದ ಪರವಾಗಿ ಬಹಳಷ್ಟು ನಡೆಯುತ್ತಿದೆ- ನಾವು ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ಬೇಡಿಕೆಯ ಪರಿಪೂರ್ಣ ಮಿಶ್ರಣವಾಗಿದ್ದೇವೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ ಪ್ರಮುಖ ಆಟಗಾರನಾಗಲು ಅಗತ್ಯವಿರುವ ಎಲ್ಲವನ್ನೂ ನಾವು ಹೊಂದಿದ್ದೇವೆ. ನಮ್ಮನ್ನು ವ್ಯಾಪಾರಕ್ಕಾಗಿ ವಿಶ್ವಾಸಾರ್ಹ ಪಾಲುದಾರರಾಗಿ ನೋಡಲಾಗುತ್ತಿದೆ. ನಮ್ಮಲ್ಲಿ ಅತ್ಯಂತ ಅಸಾಧಾರಣವಾದ ಯುವ ಶಕ್ತಿಯೂ ಇದೆ, ಸ್ಟಾರ್ಟ್‌ಅಪ್ ಜಗತ್ತಿನಲ್ಲಿ ಅವರ ಯಶಸ್ಸು ಎಲ್ಲರಿಗೂ ಗೋಚರಿಸುತ್ತಿದೆ.

ಹೀಗಾಗಿ ಆವೇಗ ಸ್ಪಷ್ಟವಾಗಿ ಭಾರತದ ಪರವಾಗಿದೆ. ಜಾಗತಿಕ ಸಾಂಕ್ರಾಮಿಕದಂತಹ ಅಭೂತಪೂರ್ವ ಸವಾಲುಗಳನ್ನು ಎದುರಿಸುತ್ತಿದ್ದರೂ, ಭಾರತವು ಬೆಳವಣಿಗೆಯ ಹಾದಿಯಲ್ಲಿ ದೃಢವಾಗಿ ಉಳಿದಿದೆ. ಇಂದು ನಮ್ಮನ್ನು ಜಾಗತಿಕ ಬೆಳವಣಿಗೆಯ ಚಾಲಕರನ್ನಾಗಿ ನೋಡಲಾಗುತ್ತಿದೆ. ಮೇಕ್ ಇನ್ ಇಂಡಿಯಾವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಮ್ಮನ್ನು ಬೆಂಬಲಿಸುವಂತೆ ನಾನು ನನ್ನ ಯುವ ಸ್ನೇಹಿತರಿಗೆ ಕರೆ ನೀಡುತ್ತೇನೆ. ನಾವೆಲ್ಲರೂ ಶ್ರೇಷ್ಠತೆಗಾಗಿ ಶ್ರಮಿಸಬೇಕು. ಗುಣಮಟ್ಟವನ್ನು ಒದಗಿಸುವುದು ನಮ್ಮ ಬದ್ಧತೆಯಾಗಬೇಕು. ಶೂನ್ಯ ದೋಷ ನಮ್ಮ ಮಂತ್ರವಾಗಬೇಕು.

ನಾವು ಒಟ್ಟಾಗಿ, ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಮಾತ್ರವಲ್ಲದೇ ಜಗತ್ತಿಗೆ ಉತ್ಪಾದನೆ ಮತ್ತು ನಾವೀನ್ಯತೆಯ ಶಕ್ತಿಕೇಂದ್ರವಾಗುವ ಭಾರತ ನಿರ್ಮಾಣವನ್ನು ಮುಂದುವರಿಸೋಣ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಶ್ರೀ ನರೇಂದ್ರ ಮೋದಿ, ಪ್ರಧಾನಮಂತ್ರಿ

contributor

Similar News