ಸ್ವಾಮಿ ಸ್ಮರಣಾನಂದ ಜೀ ಸ್ಮರಣೀಯ ಬದುಕು

ಭಾರತದ ಅಭಿವೃದ್ಧಿಯಾನದಲ್ಲಿ ನಮ್ಮ ತಾಯ್ನೆಲ ಹಲವಾರು ಸಂತರು ಮತ್ತು ಸ್ವಾಮಿ ಆತ್ಮಸ್ಥಾನಂದ ಜೀ ಮತ್ತು ಸ್ವಾಮಿ ಸ್ಮರಣಾನಂದ ಜೀ ಅವರಂತಹ ಶ್ರೀಗಳಿಂದ ಆಶೀರ್ವದಿಸಲ್ಪಟ್ಟಿದೆ. ಇವರೆಲ್ಲ ಸಾಮಾಜಿಕ ಬದಲಾವಣೆಗೆ ಕಿಡಿ ಹೊತ್ತಿಸಿದ್ದರು. ಸಮಾಜದ ಎಲ್ಲಾ ಆಯಾಮದ ಸವಾಲುಗಳನ್ನು ನಿವಾರಿಸಲು ಮತ್ತು ಸಾಮೂಹಿಕ ಸ್ಫೂರ್ತಿಯಿಂದ ಕಾರ್ಯನಿರ್ವಹಿಸಲು ಪ್ರೇರಣೆ ನೀಡಿದ್ದರು. ಈ ತತ್ವಗಳು ಶಾಶ್ವತವಾಗಿವೆ ಮತ್ತು ಅಮೃತ ಕಾಲದ ಸಮಯದಲ್ಲಿ ನಾವು ವಿಕಸಿತ ಭಾರತವನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದಾಗ ನಮ್ಮ ಶಕ್ತಿಯ ಮೂಲವಾಗಿ ಇವು ಕಾರ್ಯನಿರ್ವಹಿಸುತ್ತವೆ.

Update: 2024-03-29 05:10 GMT

ಅಗಲಿದ ಸ್ವಾಮಿ ಸ್ಮರಣಾನಂದ ಅವರ ಕುರಿತು ಶ್ರೀ ನರೇಂದ್ರ ಮೋದಿ ಅವರ ಬರಹ ಇಲ್ಲಿದೆ...

ಲೋಕಸಭಾ ಚುನಾವಣೆಯ ಮಹಾ ಉತ್ಸವ, ಸಡಗರದ ನಡುವೆ ಶ್ರೀಮದ್ ಸ್ವಾಮಿ ಸ್ಮರಣಾನಂದ ಜೀ ಮಹಾರಾಜ್ ಅವರ ಅಗಲಿಕೆಯ ಸುದ್ದಿ ತಮ್ಮ ಮನಸ್ಸನ್ನು ಕೆಲವು ಕಾಲ ಸ್ತಬ್ದಗೊಳಿಸಿತು. ಶ್ರೀಮದ್ ಸ್ವಾಮಿ ಸ್ಮರಣಾನಂದ ಜೀ ಮಹಾರಾಜ್ ಭಾರತದ ಆಧ್ಯಾತ್ಮಿಕ ಪ್ರಜ್ಞೆಯ ಪ್ರವರ್ತಕರು ಮತ್ತು ಅವರ ನಿಧನದಿಂದ ತಮಗೆ ವೈಯಕ್ತಿಕವಾಗಿ ನಷ್ಟವಾಗಿದೆ. ಕೆಲವು ವರ್ಷಗಳ ಹಿಂದೆ ಸ್ವಾಮಿ ಆತ್ಮಸ್ಥಾನಂದ ಜೀ ಅವರು ನಿಧನ ಹೊಂದಿದರು ಮತ್ತು ಈಗ ಸ್ವಾಮಿ ಸ್ಮರಣಾನಂದ ಜೀ ಅವರ ಶಾಶ್ವತ ನಿರ್ಗಮನ ಅನೇಕ ಜನರನ್ನು ದುಃಖಿತರನ್ನಾಗಿ ಮಾಡಿದೆ. ಕೋಟ್ಯಂತರ ಭಕ್ತರು, ಸಂತರು ಮತ್ತು ರಾಮಕೃಷ್ಣ ಮಠ ಹಾಗೂ ಮಿಷನ್ ನ ಅನುಯಾಯಿಗಳ ಹೃದಯದಂತೆ ನನ್ನ ಹೃದಯವೂ ಸಹ ದುಃಖಿತವಾಗಿದೆ.

ಈ ತಿಂಗಳ ಆರಂಭದಲ್ಲಿ ತಾವು ಕೋಲ್ಕತಾಗೆ ಭೇಟಿ ನೀಡಿದ್ದಾಗ ಸ್ವಾಮಿ ಸ್ಮರಣಾನಂದ ಜೀ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ತೆರಳಿದ್ದೆ. ಸ್ವಾಮಿ ಆತ್ಮಸ್ಥಾನಂದ ಜೀ ಅವರಂತೆ ಸ್ವಾಮಿ ಸ್ಮರಣಾನಂದ ಜೀ ಅವರು ಸಹ ಜಗತ್ತಿನಾದ್ಯಂತ ಆಚಾರ್ಯ ರಾಮಕೃಷ್ಣ ಪರಮಹಂಸ, ಮಾತಾ ಶಾರದಾ ದೇವಿ ಮತ್ತು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಜಗತ್ತಿನಾದ್ಯಂತ ಪಸರಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಈ ಲೇಖನ ಬರೆಯುವಾಗ ಅವರೊಂದಿಗಿನ ಭೇಟಿಗಳು ಮತ್ತು ಸಂವಾದಗಳು ತಮ್ಮ ಮನಸ್ಸನ್ನು ಹೊಸದಾಗಿ ಹಾದುಹೋದವು.

ಕಳೆದ 2020 ರ ಜನವರಿಯಲ್ಲಿ ಬೇಲೂರು ಮಠ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಾನು ಸ್ವಾಮಿ ವಿವೇಕಾನಂದರ ಕೋಣೆಯಲ್ಲಿ ಧ್ಯಾನ ಮಾಡಿದ್ದೆ. ಭೇಟಿ ಕಾಲದಲ್ಲಿ ಸ್ವಾಮಿ ಆತ್ಮಸ್ಥಾನಂದ ಜೀ ಅವರ ಕುರಿತು ಸ್ವಾಮಿ ಸ್ಮರಣಾನಂದ ಜೀ ಅವರೊಂದಿಗೆ ಸುದೀರ್ಘ ಸಂಭಾಷಣೆ ನಡೆಸಿದ್ದೆ.

ತಾವು ಬೇಲೂರ್ ಮಠ್ ಮತ್ತು ರಾಮಕೃಷ್ಣ ಮಿಷನ್ ನೊಂದಿಗೆ ನಿಕಟವಾದ ಬಾಂಧವ್ಯ ಹೊಂದಿರುವುದು ವಿಸ್ತೃತವಾಗಿ ಎಲ್ಲರಿಗೂ ತಿಳಿದಿದೆ. ಆಧ್ಯಾತ್ಮಿಕತೆಯ ಅನ್ವೇಷಕನಾಗಿ ನಾನು ವಿವಿಧ ಸಾಧು, ಸಂತರು ಮತ್ತು ಮಹಾತ್ಮರನ್ನು ಭೇಟಿ ಮಾಡಿದ್ದೇನೆ ಮತ್ತು ಐದು ದಶಕಗಳಲ್ಲಿ ಅನೇಕ ಸ್ಥಳಗಳಿಗೆ ತೆರಳಿದ್ದೇನೆ. ರಾಮಕೃಷ್ಣ ಮಠದಲ್ಲಿ ಆಧ್ಯಾತ್ಮಿಕವಾಗಿ ತಮ್ಮ ಬದುಕನ್ನು ಸ್ವಾಮಿ ಆತ್ಮಸ್ಥಾನಂದ ಜೀ ಮತ್ತು ಸ್ವಾಮಿ ಸ್ಮರಣಾನಂದ ಜೀ ಅವರಂತೆ ಪ್ರಮುಖವಾಗಿ ಸಮರ್ಪಿಸಿಕೊಂಡ ಬಗ್ಗೆ ತಮಗೆ ಮಾಹಿತಿ ಇದೆ. ಅವರ ಪವಿತ್ರ ಆಲೋಚನೆಗಳು ಮತ್ತು ಜ್ಞಾನ ತಮ್ಮ ಮನಸ್ಸಿಗೆ ತೃಪ್ತಿ ನೀಡಿದೆ. ನನ್ನ ಜೀವನದ ಅತ್ಯಂತ ಮಹತ್ವದ ಅವಧಿಯಲ್ಲಿ ಇಂತಹ ಸಂತರು ತಮಗೆ ‘ಜನಸೇವೆಯೇ ಪ್ರಭು ಸೇವೆ’ ಎಂಬ ನಿಜವಾದ ತತ್ವವನ್ನು ಕಲಿಸಿದ್ದಾರೆ. ಆತ್ಮಸ್ಥಾನಂದ ಜೀ ಮತ್ತು ಸ್ವಾಮಿ ಸ್ಮರಣಾನಂದ ಜೀ ಅವರಂತೆ ರಾಮಕೃಷ್ಣ ಮಿಷನ್‌ನ ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ ಎಂಬ ಧ್ಯೇಯವಾಕ್ಯ ಅಳಿಸಲಾಗದ ಉದಾಹರಣೆಯಾಗಿದೆ.

ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ರಾಮಕೃಷ್ಣ ಮಿಷನ್ ನ ಪ್ರಮುಖ ಕೆಲಸ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ರಾಮಕೃಷ್ಣ ಮಿಷನ್ ಭಾರತದ ಆಧ್ಯಾತ್ಮಿಕ ಜ್ಞಾನ, ಶೈಕ್ಷಣಿಕ ಸಬಲೀಕರಣ ಮತ್ತು ಮಾನವೀಯ ವಲಯದಲ್ಲಿ ಸೇವೆ ಸಲ್ಲಿಸುತ್ತಿದೆ. 1978 ರಲ್ಲಿ ಬಂಗಾಳದಲ್ಲಿ ಪ್ರವಾಹದಿಂದ ಸಂಕಷ್ಟ ಎದುರಾದಾಗ ರಾಮಕೃಷ್ಣ ಮಿಷನ್ ನ ಸ್ವಾರ್ಥ ರಹಿತ ಸೇವೆ ಪ್ರತಿಯೊಬ್ಬರ ಹೃದಯವನ್ನು ಗೆದ್ದಿದೆ. 2001 ರಲ್ಲಿ ಕಛ್ ನಲ್ಲಿ ಭೂಕಂಪನವಾದಾಗ ತಮಗೆ ನೆನಪಿದೆ ಸ್ವಾಮಿ ಆತ್ಮಸ್ಥಾನಂದ ಜೀ ಅವರು ಮೊದಲು ತಮಗೆ ದೂರವಾಣಿ ಮೂಲಕ ಮಾತನಾಡಿದ ವ್ಯಕ್ತಿಯಾಗಿದ್ದರು ಮತ್ತು ಸಂಕಷ್ಟದಲ್ಲಿರುವ ಜನರಿಗೆ ಸಾಧ್ಯತೆಯ ನೆರವು ನೀಡಲು ರಾಮಕೃಷ್ಣ ಮಿಷನ್ ಸಿದ್ಧವಾಗಿದೆ ಎಂದು ಹೇಳಿದ್ದರು. ಅವರ ಮಾರ್ಗದರ್ಶನದಲ್ಲಿ ರಾಮಕೃಷ್ಣ ಮಿಷನ್ ಭೂಕಂಪನದಿಂದ ತೊಂದರೆಗೀಡಾದ ಹಲವಾರು ಜನರಿಗೆ ನೆರವಾಯಿತು.

ವರ್ಷಗಳಿಂದ ಸ್ವಾಮಿ ಆತ್ಮಸ್ಥಾನಂದ ಜೀ ಮತ್ತು ಸ್ವಾಮಿ ಸ್ಮರಣಾನಂದ ಜೀ ಅವರು ಹಲವಾರು ಹುದ್ದೆಗಳನ್ನು ನಿಭಾಯಿಸಿದ್ದು, ಇವರು ಸಾಮಾಜಿಕ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಈ ಮಹಾನ್ ವ್ಯಕ್ತಿಗಳ ಜೀವನವನ್ನು ಬಲ್ಲವರು ಖಂಡಿತವಾಗಿಯೂ ಈ ಸಂತರು ಆಧುನಿಕ ಶಿಕ್ಷಣ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಎಷ್ಟೊಂದು ಗಂಭೀರವಾಗಿದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.

ಅವರ ಅನೇಕ ಸ್ಫೂರ್ತಿದಾಯಕ ಗುಣಲಕ್ಷಣಗಳಲ್ಲಿ ನನ್ನನ್ನು ಹೆಚ್ಚು ಪ್ರಭಾವಿಸಿದ ಒಂದು ವಿಷಯವೆಂದರೆ ಸ್ವಾಮಿ ಆತ್ಮಸ್ಥಾನಂದ ಜೀ ಅವರ ಪ್ರತಿಯೊಂದು ಸಂಸ್ಕೃತಿ ಮತ್ತು ಪ್ರತಿಯೊಂದು ಸಂಪ್ರದಾಯದ ಮೇಲಿನ ಪ್ರೀತಿ ಮತ್ತು ಗೌರವ. ಈ ಕಾರಣದಿಂದ ಭಾರತದ ವಿವಿಧ ಭಾಗಗಳಿಗೆ ನಿರಂತರವಾಗಿ ಭೇಟಿ ನೀಡಿದೆ ಮತ್ತು ಹೆಚ್ಚು ಸಮಯವನ್ನು ಕಳೆದೆ. ಅವರು ಗುಜರಾತ್ ನಲ್ಲಿ ನೆಲೆಸಿದ್ದಾಗ ಗುಜರಾತ್ ಭಾಷೆ ಕಲಿತರು. ಅವರು ನನ್ನೊಂದಿಗೂ ಸಹ ಇದೇ ಭಾಷೆಯಲ್ಲಿ ಮಾತನಾಡುತ್ತಿದ್ದರು ಮತ್ತು ಅವರ ಗುಜರಾತಿ ಭಾಷೆಯನ್ನು ಪ್ರೀತಿಯಿಂದ ಆಲಿಸುತ್ತಿದ್ದೆ.

ಭಾರತದ ಅಭಿವೃದ್ಧಿಯಾನದಲ್ಲಿ ನಮ್ಮ ತಾಯ್ನೆಲ ಹಲವಾರು ಸಂತರು ಮತ್ತು ಸ್ವಾಮಿ ಆತ್ಮಸ್ಥಾನಂದ ಜೀ ಮತ್ತು ಸ್ವಾಮಿ ಸ್ಮರಣಾನಂದ ಜೀ ಅವರಂತಹ ಶ್ರೀಗಳಿಂದ ಆಶೀರ್ವದಿಸಲ್ಪಟ್ಟಿದೆ. ಇವರೆಲ್ಲ ಸಾಮಾಜಿಕ ಬದಲಾವಣೆಗೆ ಕಿಡಿ ಹೊತ್ತಿಸಿದ್ದರು. ಸಮಾಜದ ಎಲ್ಲಾ ಆಯಾಮದ ಸವಾಲುಗಳನ್ನು ನಿವಾರಿಸಲು ಮತ್ತು ಸಾಮೂಹಿಕ ಸ್ಫೂರ್ತಿಯಿಂದ ಕಾರ್ಯನಿರ್ವಹಿಸಲು ಪ್ರೇರಣೆ ನೀಡಿದ್ದರು. ಈ ತತ್ವಗಳು ಶಾಶ್ವತವಾಗಿವೆ ಮತ್ತು ಅಮೃತ ಕಾಲದ ಸಮಯದಲ್ಲಿ ನಾವು ವಿಕಸಿತ ಭಾರತವನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದಾಗ ನಮ್ಮ ಶಕ್ತಿಯ ಮೂಲವಾಗಿ ಇವು ಕಾರ್ಯನಿರ್ವಹಿಸುತ್ತವೆ.

ಇಡೀ ದೇಶದ ಪರವಾಗಿ ಇಂತಹ ಸಂತರ ಆತ್ಮಗಳಿಗೆ ಮತ್ತೊಮ್ಮೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ರಾಮಕೃಷ್ಣ ಮಿಷನ್‌ಗೆ ಸಂಬಂಧಿಸಿದ ಎಲ್ಲಾ ಜನರು ಅವರು ತೋರಿಸಿದ ಹಾದಿಯಲ್ಲಿ ಮುಂದೆ ಸಾಗುತ್ತಾರೆ ಎಂಬ ವಿಶ್ವಾಸ ತಮಗಿದೆ.

ಓಂ ಶಾಂತಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನರೇಂದ್ರ ಮೋದಿ, ಪ್ರಧಾನ ಮಂತ್ರಿ

ಪ್ರಧಾನ ಮಂತ್ರಿ, ಭಾರತ ಸರ್ಕಾರ

Similar News