ಭದ್ರಾವತಿ: ಎರಡು ವರ್ಷದ ಮಗು ಸಹಿತ 50 ಮಂದಿಯ ಮೇಲೆ ಹೆಜ್ಜೇನು ದಾಳಿ

Update: 2024-05-22 08:21 GMT

ಸಾಂದರ್ಭಿಕ ಚಿತ್ರ (credit: wikipedia )

ಶಿವಮೊಗ್ಗ, ಮೇ 22: ಎರಡು ವರ್ಷದ ಮಗು ಸಹಿತ 50ಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ ಜಿಲ್ಲೆಯ ಭದ್ರಾವತಿಯ ಬಾಬಳ್ಳಿ ಎಂಬಲ್ಲಿ ನಡೆದಿರುವ ವರದಿಯಾಗಿದೆ.

ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಸಿದ್ದತೆ ವೇಳೆ ಈ ಘಟನೆ ನಡೆದಿದ್ದು, ಜಾತ್ರೆ ಹಿನ್ನೆಲೆ ಗಂಗೆ ಪೂಜೆ ಮಾಡಲು ಜನ ಹೊರಟ್ಟಿದ್ದ ವೇಳೆ ಪೊದೆಯಲ್ಲಿದ್ದ ಹೆಜ್ಜೇನುಗಳು ದಾಳಿ ನಡೆಸಿವೆ.

ಹೆಜ್ಜೇನು ದಾಳಿ ವೇಳೆ 12 ವರ್ಷದ ಬಾಲಕನೋರ್ವ ಎರಡು ವರ್ಷದ ಮಗುವಿನ ರಕ್ಷಣೆ ಮಾಡಿದ್ದಾನೆ. ಬಾಲಕ ಗಗನ್ 10 ಕ್ಕೂ ಹೆಚ್ಚು ಹೆಜ್ಜೇನು ಕಚ್ಚಿಸಿಕೊಂಡರೂ ಸಹ ಎರಡು ವರ್ಷದ ಬಾಲಕನ ರಕ್ಷಣೆ ಮಾಡಿ ಸಾಹಸ ಮೆರೆದಿದ್ದಾನೆ.

ಹೆಜ್ಜೇನು ದಾಳಿಯಿಂದ ಗಾಯಗೊಂಡವರಿಗೆ ಭದ್ರಾವತಿ ಹಾಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News