ಶಿವಮೊಗ್ಗ | ನದಿಯಲ್ಲಿ ಸ್ನಾನಕ್ಕಿಳಿದ ಯುವಕ ನೀರುಪಾಲು

Update: 2024-10-02 16:17 GMT

ಶಿವಮೊಗ್ಗ: ಇಲ್ಲಿನ ಕೂಡ್ಲಿಯ ತುಂಗಾಭದ್ರ ಸಂಗಮದಲ್ಲಿ ಮುಳುಗಿ ಯುವಕನೋರ್ವ ನೀರುಪಾಲಾಗಿರುವ ಘಟನೆ ಬುಧವಾರ ನಡೆದಿದೆ.

ನೀರುಪಾಲಾದ ಯುವಕ ಹರ್ಷಿತ್ (23) ಎಂದು ತಿಳಿದು ಬಂದಿದೆ. ಹೊಳಲ್ಕೆರೆಯಿಂದ ಕುಟುಂಬಸ್ಥರೊಂದಿಗೆ ಬುಧವಾರ ಕೂಡ್ಲಿಯ ತುಂಗಾಭದ್ರ ಸಂಗಮದಲ್ಲಿ ಮಹಾಲಯ ಅಮಾವಾಸ್ಯೆ ಪೂಜೆ ನೆರವೇರಿಸಲು ಬಂದಿದ್ದ ಹರ್ಷಿತ್, ಪೂಜೆ ನೆರವೇರಿಸಿ ಸ್ನಾನ್ನಕೆಂದು ನದಿಗೆ ಇಳಿದು ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದಾನೆ ಎಂದು ತಿಳಿದು ಬಂದಿದೆ,

ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರ ತಂಡ ನದಿಯಲ್ಲಿ ಯುವಕನ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News