ಶಿವಮೊಗ್ಗ: ಬ್ಯಾರೀಸ್ ಗ್ರೀನ್ ರೈಡ್ ಸೈಕಲ್ ಜಾಥಾಕ್ಕೆ ಎಸ್ಪಿ ಚಾಲನೆ

Update: 2024-10-02 15:10 GMT

ಶಿವಮೊಗ್ಗ, ಅ.2: ಪರಿಸರ ಪ್ರಜ್ಞೆ ಇಂದು ಅತಿ ಅಗತ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

ನಗರದ ಬ್ಯಾರೀಸ್ ಸಂಸ್ಥೆ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಬ್ಯಾರೀಸ್ ಗ್ರೀನ್ ರೈಡ್ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪರಿಸರ ಇಂದು ಹಾಳಾಗುತ್ತಿದೆ. ಈ ಬಗ್ಗೆ ಜಾಗೃತಿ ಮೂಡಬೇಕಾಗಿದೆ. ತಾಪಮಾನ ಹೆಚ್ಚಾಗುತ್ತಿದ್ದು, ಇದರಿಂದ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಕೆಲವು ಸರಳ ಚಟುವಟಿಕೆಗಳನ್ನು ನಡೆಸುವುದರ ಮೂಲಕ ನಾವು ಪರಿಸರವನ್ನು ಕಾಪಾಡಬಹುದಾಗಿದೆ. ಅದರಲ್ಲಿ ಸೈಕಲ್ ಸವಾರಿ ಕೂಡ ಒಂದು. ಸೈಕಲ್ ಪರಿಸರ ಸ್ನೇಹಿಯಾಗಿದೆ. ಕೇವಲ ದಿನಾಚರಣೆಗಾಗಿ ಬಳಸದೆ ಪ್ರತಿ ದಿನ ಬಳಸುವಂತೆ ಜಿ.ಕೆ.ಮಿಥುನ್ ಕುಮಾರ್ ಯುವಕರಿಗೆ ಕಿವಿಮಾತು ಹೇಳಿದರು.


ಈ ಸಂದರ್ಭದಲ್ಲಿ ಬ್ಯಾರೀಸ್ ಸಂಸ್ಥೆಯ ಮ್ಯಾನೇಜರ್ ಮೊಹಿದ್ದೀನ್, ಸಂಚಾಲಕ ನಂದಕುಮಾರ್ ಸೇರಿದಂತೆ ಹಲವರಿದ್ದರು.

ಸೈಕಲ್ ಜಾಥಾದಲ್ಲಿ ನಗರದ ಹಲವು ಕಾಲೇಜುಗಳ ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳು, ಸಂಘ ಸಂಸ್ಥೆಯ ಮುಖ್ಯಸ್ಥರು, ಸೈಕಲ್ ಪ್ರಿಯರು ಭಾಗವಹಿಸಿದ್ದರು. ಜಾಥಾದಲ್ಲಿ ಭಾಗವಹಿಸಿದ ಎಲ್ಲರಿಗೂ 'ಬ್ಯಾರೀಸ್' ವತಿಯಿಂದ ಪ್ರಮಾಣ ಪತ್ರ ನೀಡಲಾಯಿತು.















Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News