ಮೋದಿ ಎದುರು ಶ್ರೀರಾಮನನ್ನು ಕುಬ್ಜನನ್ನಾಗಿಸಿದ ಬಿಜೆಪಿ: ಕಾಂಗ್ರೆಸ್ ವಾಗ್ದಾಳಿ

Update: 2023-12-24 14:42 GMT

ಬೆಂಗಳೂರು: ಮರ್ಯಾದಾ ಪುರುಷೋತ್ತಮನ ಮರ್ಯಾದೆ ತೆಗೆದ ಬಿಜೆಪಿ ಶ್ರೀರಾಮನಿಗೆ ಕೈಕೆಯಿಗಿಂತ ಹೆಚ್ಚು ಅವಮಾನಿಸಿದೆ. ಮೋದಿ ಎದುರು ಶ್ರೀರಾಮನನ್ನು ಕುಬ್ಜನನ್ನಾಗಿಸಿದ ಬಿಜೆಪಿ ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತಂದಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಈ ಸಂಬಂಧ ಸಾಮಾಜಿಕ ಜಾಲ ತಾಣ ʼಎಕ್ಸ್ʼ ನಲ್ಲಿ ರಾಜ್ಯ ಬಿಜೆಪಿ ಬಾಲ ಶ್ರೀರಾಮನನ್ನು ಪ್ರಧಾನಿ ಮೋದಿ ಕೈ ಹಿಡಿದು ನಡೆದು ಹೋಗುತ್ತಿರುವಂತೆ ಕಾಣುವ ಭಾವಚಿತ್ರವನ್ನು ಹಂಚಿಕೊಂಡಿರುವುದಕ್ಕೆ ಕಾಂಗ್ರೆಸ್ ಈ ರೀತಿ ಪ್ರತಿಕ್ರಿಯಿಸಿದೆ.

ಶ್ರೀರಾಮನಿಗೆ ಮೋದಿಯೆ ಮಾರ್ಗದರ್ಶಕ ಎಂಬಂತೆ ಚಿತ್ರಿಸಿದ ಬಿಜೆಪಿ ದೇವರ ಪೂಜೆಗಿಂತ ವ್ಯಕ್ತಿ ಪೂಜೆಯೇ ಶ್ರೇಷ್ಠ ಎಂದು ಪ್ರತಿಪಾದಿಸುತ್ತಿದೆ. ಅಂದು ರಾವಣನನ್ನು ಸಂಹರಿಸಿದ್ದ ರಾಮನಿಂದಲೇ ಇಂದು ರಾಜ್ಯ ಬಿಜೆಪಿ ಸಂಹಾರ ನಡೆಯುವುದು ಖಚಿತ ಎಂದು ಕಾಂಗ್ರೆಸ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News