ಹಾಸನ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಗಳ ಸಭೆಯಲ್ಲಿ ಕಾರ್ಯಕರ್ತರ ನಡುವೆ ಜಟಾಪಟಿ

Update: 2023-10-22 15:04 GMT

ಹಾಸನ : ನಗರದ ಹೊರವಲಯ ಹೊಳೆನರಸೀಪುರ ರಸ್ತೆ ಬಳಿ ಇರುವ ನಂದಗೋಕುಲ ಸಭಾ ಭವನದಲ್ಲಿ ರವಿವಾರ 2024ರ ಲೋಕಸಭಾ ಚುನಾವಣೆ ಹಿನ್ನಲೆ ಆಯೋಜನೆಗೊಂಡಿದ್ದ ಕಾಂಗ್ರೆಸ್ ಸಭೆಗೂ ಮುನ್ನ ಕಾರ್ಯಕರ್ತರ ನಡುವೆ ಗದ್ದಲ, ಗೊಂದಲ, ಮಾತಿನ ಚಕಮಕಿ ನಡೆದು ಸಭೆಗೆ ಆಗಮಿಸಿದ್ದ ಕೃಷಿ ಸಚಿವ ಚೆಲುವರಾಯಸ್ವಾಮಿ ಅಸಮಧಾನ ಹೊರ ಹಾಕಿದ ಪ್ರಸಂಗ ನಡೆಯಿತು.

ಕಾಂಗ್ರೆ ಮುಖಂಡ ಎಚ್ ಕೆ ಮಹೇಶ್ ಅವರಿಗೆ ವೇದಿಕೆ ಮೇಲೆ ಆಸನ ಸಿಕ್ಕಿಲ್ಲ, ಇನ್ನು ಪ್ಲೆಕ್ಸ್ ನಲ್ಲಿ ಸಹ ಶಾಸಕರ ಪೋಟೊ ಹಾಕಿಲ್ಲ ಎಂದು ಕೆಲವು ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು. 

ಈ ವೇಳೆ  ಕಾರ್ಯಕರ್ತರ ನಡೆಗೆ ಬೇಸರ ಹೊರಹಾಕಿದ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು, ʼʼನೀವು ಈ ರೀತಿ ಗಲಾಟೆ ಮಾಡಿದ್ರೆ ನಾನು ವಾಪಸ್ ಹೊರಟು ಹೋಗುತ್ತೇನೆ. ನನ್ನ 40 ವರ್ಷದಲ್ಲಿ ಈ ರೀತಿ ಸಭೆ ನಾನು ನೋಡಿಲ್ಲ. ನೀವು ಈ ರೀತಿ ಮಾಡಿದರೆ ಕಷ್ಟ, ಎಲ್ಲವನ್ನೂ ಸರಿ ಮಾಡೋಣ, ಸಣ್ಣ ಪುಟ್ಟ ವ್ಯತ್ಯಾಸಗಳನ್ನ ಸರಿ ಮಾಡಿಕೊಂಡು ಹೋರಾಡೋಣʼʼ ಎಂದು ಕಾರ್ಯಕರ್ತರನ್ನ ಸಮದಾನಪಡಿಸಿ ಸಭೆಯನ್ನು ಹತೋಟಿಗೆ ತಂದರು. 

ʼಲೋಕಸಭಾ ಚುನಾವಣೆಗೆ ಹೈಕಾಮಂಡ್ ಯಾರನ್ನೇ ಅಭ್ಯರ್ಥಿಯಾಗಿ ನಿಲ್ಲಿಸಿದರೂ ಅವರನ್ನು ಗೆಲ್ಲಿಸಿಕೊಂಡು ಬರುವ ಕೆಲಸವನ್ನು ನಾವುಗಳು ಮಾಡೋಣʼʼ ಇದೇ ವೇಳೆ ಕಾರ್ಯಕರ್ತರಿಗೆ ಅವರು ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News