ಅಧ್ಯಕ್ಷರು ಬಂದ ತಕ್ಷಣ ಏನೂ ಬದಲಾವಣೆಯಾಗಲ್ಲ; ಜನರ ವಿಶ್ವಾಸ ಗಳಿಸುವುದು ಮುಖ್ಯ: ಸಚಿವ ಮಧು ಬಂಗಾರಪ್ಪ

Update: 2023-11-11 17:59 GMT

ಶಿವಮೊಗ್ಗ,ನ.11: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ವೈ.ವಿಜಯೇಂದ್ರ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಪಕ್ಷಕ್ಕೆ ಅಧ್ಯಕ್ಷರು ಬಂದ ತಕ್ಷಣ ಎಲ್ಲಾ ಆಗಲ್ಲ. ಜನರ ವಿಶ್ವಾಸ ಗಳಿಸುವುದು ಅತಿ ಮುಖ್ಯವಾಗುತ್ತದೆ'' ಎಂದರು.

ಬಿಜೆಪಿ ಕ್ಯಾಪ್ಟನ್‌ಲೆಸ್ ಅಂತಾ ನಾನು ಹೇಳಿದ್ದು ವಿಧಾನಸಭೆ ಒಳಗೆ. ಆ ಪಕ್ಷಕ್ಕೆ ಈಗಲೂ ವಿಪಕ್ಷ ನಾಯಕ ಇಲ್ಲ.ಈಗ ಕ್ಯಾಪ್ಟನ್ ಮಾಡ್ತಾರಂತೆ.ಇಷ್ಟು ದಿನ ಯಾಕೆ ಮಾಡಲಿಲ್ಲ, ವಿಧಾನಸಭೆಯೊಳಗೆ ಪ್ರಶ್ನೆ ಮಾಡೋರು ಯಾರು ಎಂದು ಪ್ರಶ್ನಿಸಿದರು.

ಬಿಜೆಪಿಯವರು ವಿಧಾನ ಸಭೆ ಚುನಾವಣೆಯಲ್ಲೂ ವಿಶ್ವಾಸ ಕಳೆದುಕೊಂಡಿದ್ದಾರೆ. ಲೋಕಸಭೆಯಲ್ಲೂ ವಿಶ್ವಾಸ ಕಳೆದುಕೊಳ್ಳುತ್ತಾರೆ. ಗ್ಯಾರೆಂಟಿಗಳನ್ನ ಕೊಟ್ಟಿದ್ದೇವೆ. ಚುನಾವಣೆಯಲ್ಲಿ ಜನ ತೀರ್ಮಾನ ಮಾಡ್ತಾರೆ ಬಿಡಿ ಎಂದರು.

ಲೋಕಸಭೆಯಲ್ಲಿ 28 ಸ್ಥಾನ ಗೆಲ್ಲುತ್ತೇವೆ ಅಂತಾ ಬಿಜೆಪಿ ಯವರು ಹೇಳ್ತಾರೆ. ಹಣೆಬರಹ ಬರೆಯುವವರು ತೀರ್ಮಾನ ಮಾಡೋದು ಜನರು. ಈ ಹಿಂದೆ ಸಹ ಬಹಳ ಅಧ್ಯಕ್ಷರು ಬಂದಿದ್ದರು. ಬಹಳ ಭಾಷಣ ಮಾಡಿದ್ದರೂ ಏನು ಆಗಿಲ್ಲ. ಜನ ತೀರ್ಮಾನ ಮಾಡಿ ಕಳುಹಿಸಿದ್ದಾರೆ. ಅಧ್ಯಕ್ಷರು ಬಂದ ತಕ್ಷಣ ಏನೂ ಆಗಲ್ಲ. ಮೊದಲು ಜನರ ವಿಶ್ವಾಸ ಪಡೆದುಕೊಳ್ಳಬೇಕು. ಬಿಜೆಪಿಯವರು ವಿಧಾನಸಭೆ ಚುನಾವಣೆಯಲ್ಲಿ ವಿಶ್ವಾಸ ಕಳೆದುಕೊಂಡಿದ್ದರು. ಈಗಲೂ ಅದೇ ಸ್ಥಿತಿಯಲ್ಲಿದ್ದಾರೆ'' ಎಂದರು.


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News