ರಸ್ತೆ ಅಪಘಾತ: ದಂಪತಿ ಸ್ಥಳದಲ್ಲೇ ಮೃತ್ಯು

Update: 2023-08-29 12:12 GMT

ಅರಕಲಗೂಡು (ಹಾಸನ): ಬೈಕ್‌ ಗೆ ಲಾರಿ ಢಿಕ್ಕಿ ಹೊಡೆ ಪರಿಣಾಮ  ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ತೇಜೂರು ಕೊಪ್ಪಲು ಗ್ರಾಮದ ಸಮೀಪ, ಕಣಿವೆ ಬಸವಪ್ಪ ದೇವಸ್ಥಾನ ಬಳಿ ಮಂಗಳವಾರ ವರದಿಯಾಗಿದೆ. 

ತಾಲೂಕಿನ ಅತ್ನಿಉಪ್ಪಾರಕೊಪ್ಪಲು ಗ್ರಾಮದ ನಿವಾಸಿಗಳಾದ ಪ್ರಕಾಶ್ (38), ಸರಸ್ವತಿ (36) ಮೃತಪಟ್ಟವರು ಎಂದು ಗುರುತಿಸಲಾಗಿದೆ. 

ಬೈಕ್‌ನಲ್ಲಿ ಅರಕಲಗೂಡಿನಿಂದ ಅರಸೀಕಟ್ಟೆಗೆ ತೆರಳುತ್ತಿದ್ದರು. ತೇಜೂರುಕೊಪ್ಪಲು ಕಣಿವೆ ಬಸವಪ್ಪನ ದೇವಸ್ಥಾನದ ಎದುರು ಹಿಂಬದಿಯಿಂದ ಲಾರಿ ಢಿಕ್ಕಿ ಹೊಡೆದು ದಂಪತಿ ಮೇಲೆ ಹರಿದಿದೆ ಎನ್ನಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. 

ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ  ಘಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News