ಕುತೂಹಲಕಾರಿ ವಿಶ್ಲೇಷಣೆ

ಕೃತಿ: ತುಳುನಾಡಿನ ಕೋಮು ಸಾಮರಸ್ಯ ಪರಂಪರೆ ಲೇಖಕರು: ಮುಹಮ್ಮದ್ ರಿಯಾಝ್, ಕಾರ್ಕಳ ಮುಖಬೆಲೆ: 230 ರೂ. ಪ್ರಕಾಶಕರು: ಜ್ಯೋತಿ ಪ್ರಕಾಶನ ಎಂ-15, ಕರ್ನಾಟಕ ಬ್ಯಾಂಕ್ ರಸ್ತೆ, ವಿವೇಕಾನಂದ ಸರ್ಕಲ್ ಹತ್ತಿರ, ಮೈಸೂರು -570004 ಫೋನ್: 9844212231;

Update: 2025-02-13 15:17 IST
ಕುತೂಹಲಕಾರಿ ವಿಶ್ಲೇಷಣೆ
  • whatsapp icon

ಕಾರ್ಕಳದ ಮುಹಮ್ಮದ್ ರಿಯಾಝ್ ಅವರ ‘ತುಳುನಾಡಿನ ಕೋಮುಸಾಮರಸ್ಯ ಪರಂಪರೆ’ ಪುಸ್ತಕವು ತುಳುನಾಡಿನಲ್ಲಿ ಕೆಲವು ದಶಕಗಳಿಂದ ತೀವ್ರವಾಗಿ ಹಬ್ಬುತ್ತಿರುವ ಕೋಮುವಾದಕ್ಕೆ ಉತ್ತರವೋ ಎಂಬಂತೆ ಪ್ರಕಟವಾಗುತ್ತಿದೆ. ಕೋಮುವಾದ ಎಂಬ ಪದಕ್ಕೆ ವಿವಿಧ ಅರ್ಥಗಳಿರುವುದು ಹೌದಾದರೂ ವರ್ತಮಾನ ಕಾಲದಲ್ಲಿ ಅದು ಧಾರ್ಮಿಕ ದ್ವೇಷ ಮತ್ತು ಅದರ ಪ್ರಸರಣ ಕಾರ್ಯ ಎಂಬರ್ಥದಲ್ಲಿ ಸೀಮಿತವಾಗಿ ಬಳಕೆಯಾಗುತ್ತಿದೆ. ಹೀಗಾಗಿ ರಿಯಾಝ್ ಅವರು ತುಳುನಾಡಿನ ಧಾರ್ಮಿಕ ಸಂಘರ್ಷಗಳಿಗೆ ಕಾರಣಗಳನ್ನು ಹುಡುಕುತ್ತಾ ತುಳುನಾಡಿಗೆ ಬೇರೆ ಬೇರೆ ಕಾಲಘಟ್ಟದಲ್ಲಿ ಪ್ರವೇಶ ಮಾಡಿದ ವಿವಿಧ ಧರ್ಮಗಳನ್ನು ಪರಿಚಯಿಸಿರುವುದು ಸಹಜವೇ ಆಗಿದೆ. ಹೊರಗಿನಿಂದ ತುಳುನಾಡಿಗೆ ಆಗಮಿಸಿದ ಧರ್ಮಗಳು ಒಟ್ಟಾರೆಯಾಗಿ ಸಾಧಿಸಿದ ಸಮನ್ವಯದ ನೆಲೆಗಳನ್ನೂ ಲೇಖಕರು ಆಧಾರ ಸಹಿತವಾಗಿ ವಿವರಿಸುತ್ತಾರೆ. ಪ್ರಭುತ್ವ ಮತ್ತು ದೈವಾರಾಧನೆಗಳು ಕೂಡಾ ಜನರನ್ನು ಸಂಘರ್ಷಾತೀತವಾಗಿ ನೋಡಿದ ಬಗ್ಗೆಯೂ ಇಲ್ಲಿ ಕುತೂಹಲಕರವಾದ ವಿಶ್ಲೇಷಣೆಯಿದೆ. ಇವತ್ತು ಕೋಮುವಾದದ ಕೇಂದ್ರಗಳಾಗಿರುವ ಕೆಲವು ಧಾರ್ಮಿಕ ಕೇಂದ್ರಗಳು ಒಂದು ಕಾಲಕ್ಕೆ ಹೇಗೆ ಸಮನ್ವಯ ಕೇಂದ್ರಗಳಾಗಿದ್ದುಕೊಂಡು ಸಾಮಾಜಿಕ ಏಕತೆಯನ್ನು ಸಾಧಿಸಿದವು ಎಂಬ ಅಂಶವೂ ಇಲ್ಲಿ ದಾಖಲಾಗಿದೆ. ಇಂಥ ಮಹತ್ವದ ವಿಚಾರ ಮಂಡನೆ ಸಾಧ್ಯವಾಗಲು ರಿಯಾಝ್ ಅವರು ತುಳುನಾಡಿನ ಇತಿಹಾಸವನ್ನು ಗಂಭೀರವಾಗಿ ಅಭ್ಯಸಿಸಿದ್ದಾರೆ ಮತ್ತು ತುಳುನಾಡಿನಾದ್ಯಂತ ಓಡಾಡಿ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಇಂಥ ಪುಸ್ತಕಗಳನ್ನು ಪ್ರಕಟಿಸುವುದರ ಮೂಲಕ ತುಳುನಾಡಿನಲ್ಲಿ ಮತ್ತೆ ಕೋಮು ಸೌಹಾರ್ದವನ್ನು ಸಾಧಿಸಬಹುದು ಎಂಬುದು ಲೇಖಕರ ಬಲವಾದ ನಂಬಿಕೆಯಾಗಿದೆ. ಅದು ನನ್ನ ನಂಬಿಕೆಯೂ ಹೌದು.

(ಬೆನ್ನುಡಿಯಿಂದ)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪುರುಷೋತ್ತಮ ಬಿಳಿಮಲೆ

contributor

Similar News