ಗದ್ದೆಯಲ್ಲಿ ಬಿದ್ದು ಕೃಷಿಕ ಮೃತ್ಯು

Update: 2023-07-20 16:12 GMT

ಶಂಕರನಾರಾಯಣ, ಜು.20: ನೇಜಿ ಹಾಕಿದ ಗದ್ದೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ಬಾಬು ಗೊಲ್ಲ (57) ಎಂಬ ಕೃಷಿಕರು ಇಂದು ಬೆಳಗ್ಗೆ 8:30ರಿಂದ 12:30ರ ನಡುವಿನ ಅವಧಿಯಲ್ಲಿ ಅಕಸ್ಮಿಕವಾಗಿ ಗದ್ದೆಯಲ್ಲಿ ಕವುಚಿ ಬಿದ್ದಿದ್ದು, ಚಿಕಿತ್ಸೆಗೆಂದು ಹಾಲಾಡಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲಿ ಮೃತಪಟ್ಟಿದ್ದಾರೆ.

ಕೃಷಿಕರಾಗಿದ್ದ ಇವರು, ಇಂದು ಬೆಳಗ್ಗೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ಗದ್ದೆಗೆ ತೆರಳಿದ್ದರು. ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News