ಉಡುಪಿ: ಲಾಭಾಂಶ ನೀಡುವುದಾಗಿ ನಂಬಿಸಿ 81 ಲಕ್ಷ ರೂ. ವಂಚನೆ

Update: 2023-08-09 16:29 GMT

ಉಡುಪಿ, ಆ.9: ಲಾಭಾಂಶ ನೀಡುವುದಾಗಿ ನಂಬಿಸಿ 81ಲಕ್ಷ ರೂ. ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದಿಉಡುಪಿ ಮಹಾದೇವಿ ಲೇಔಟ್ ಕುಂಜಿಗುಡ್ಡೆಯ ರೇಷ್ಮಾ ಬಾನು ಎಂಬವರಿಂದ ಹಣವನ್ನು ಲಪಟಾಯಿಸುವ ಉದ್ದೇಶ ದಿಂದ ಕೆಳಮನೆ ದಸ್ತಗಿರ್ ಎಂಬಾತ ಆಕೆಯ ಗಂಡನ ಗೆಳೆತನ ಮಾಡಿಕೊಂಡಿದ್ದು, 2021ರ ನವೆಂಬರ್ ಮೊದಲನೇ ವಾರದಲ್ಲಿ ಮನೆಗೆ ಬಂದು, ಹಿಂದೂಸ್ತಾನ್ ಲಿವರ್ ಲಿಮಿಟೆಡ್ ಕಂಪೆನಿಯಲ್ಲಿ ಆರ್ಥಿಕ ಸಹಾಯ ಮಾಡಿದರೆ ಪ್ರತಿ 35ನೇ ದಿನಕ್ಕೆ ಲಾಭಾಂಶ ನೀಡುವುದಾಗಿ ನಂಬಿಸಿದ್ದನು.

ಅದರಂತೆ ರೇಷ್ಮಾ ಹಂತ ಹಂತವಾಗಿ 81,00,000ರೂ. ಹಣವನ್ನು ನೀಡಿದ್ದು, ಈ ಬಗ್ಗೆ ಕರಾರುಪತ್ರ ಮಾಡಿಕೊಂಡಿದ್ದರು. ಆದರೆ ಈವರೆಗೆ ಹಣವನ್ನು ವಾಪಾಸು ನೀಡದೆ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News